ಹೊಸಪೇಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಬೆಳ್ಳಿ ಗದೆ ನೀಡಿ ಗೌರವಿಸಿದ್ದಾರೆ.
ಹೊಸಪೇಟೆಯ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಪುನೀತ್ ಅವರನ್ನು ಸ್ವಾಗತಿಸಿದ ಸಚಿವ ಆನಂದ್ ಸಿಂಗ್, ಪುನೀತ್ ರಾಜ್ಕುಮಾರ್ ಅವರಿಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ ಸನ್ಮಾನಿಸಿದ್ದಾರೆ. ಸಚಿವರ ಕುಟುಂಬ ಸದಸ್ಯರ ಜತೆ ಪುನೀತ್ ರಾಜ್ಕುಮಾರ್ ಉಪಹಾರ ಸೇವಿಸಿದ್ದಾರೆ.
ನಟ ಪುನೀತ್ ರಾಜ್ ಕುಮಾರ್ "ಜೇಮ್ಸ್" ಚಿತ್ರದ ಶೂಟಿಂಗ್ ಹೊಸಪೇಟೆಯ ಹಂಪಿ ಸಮೀಪದ ಕಮಲಾಪುರದಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಹೊಸಪೇಟೆಯಲ್ಲಿ ಪುನೀತ್ ಹಾಗೂ ಚಿತ್ರತಂಡ ನೆಲೆಸಿದೆ.
ಈ ನಡುವೆ ನಟ ಇಂದು ಬೆಳಿಗ್ಗೆ ಸಚಿವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಹ ಉಪಸ್ಥಿತರಿದ್ದರು.
Advertisement