ತಂಗಾಳಿ ನಾಗರಾಜ್
ತಂಗಾಳಿ ನಾಗರಾಜ್

ಕನ್ನಡ ಚಿತ್ರಸಾಹಿತಿ ತಂಗಾಳಿ ನಾಗರಾಜ್ ನಿಧನ

ಕನ್ನಡ ಸಿನಿಮಾದ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ವಿಧಿವಶರಾಗಿದ್ದಾರೆ.

ಕನ್ನಡ ಸಿನಿಮಾದ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ವಿಧಿವಶರಾಗಿದ್ದಾರೆ.

ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

"ತಂಗಾಳಿ ಎಲ್ಲಿಂದ ಬೀಸುವೆ" ಎಂಬ ಹಾಡು ಬರೆದು ಖ್ಯಾತವಾಗಿದ್ದ ನಾಗರಾಜ್ ನಂತರದಲ್ಲಿ ತಂಗಾಳಿ ನಾಗರಾಜ್ ಎಂದೇ ಹೆಸರಾಗಿದ್ದರು. 

ಹದಿನೈದು ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಗೀತರಚನೆಗಾರರಾಗಿದ್ದ ನಾಗರಾಜ್ ನೂರಾರು ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ.

ತಂಗಾಳಿ ನಾಗರಾಜ್ ಅವರ ನಿಧನಕ್ಕೆ ಗೀತರಚನೆಗಾರ ಕವಿರಾಜ್, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com