ಭರವಸೆ ಮೂಡಿಸಿದ 'ಇನಾಮ್ದಾರ್' ಸಿನಿಮಾದ ಟ್ರೈಲರ್, ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಿರಶ್ರೀ ಅಂಚನ್

ಚಿರಶ್ರೀ ಅಂಚನ್ ಅವರು ಸಂದೇಶ್ ಶೆಟ್ಟಿ ಅಜ್ರಿ ಅವರ ಮುಂಬರುವ ನಿರ್ದೇಶನದ ಇನಾಮ್ದಾರ್‌ ಸಿನಿಮಾಗಾಗಿ ಸದ್ಯ ಸುದ್ದಿಯಾಗುತ್ತಿದ್ದಾರೆ. ಇದಕ್ಕೂ ಮೊದಲು, ಚಿತ್ರತಂಡ ಭೂಮಿ ಶೆಟ್ಟಿಯನ್ನು ಈ ಪಾತ್ರಕ್ಕಾಗಿ ಕರೆದಿದ್ದರು. ಆದರೆ, ಕಾಲಿನ ಗಾಯದಿಂದಾಗಿ ನಟಿಯು ಈ ಸಿನಿಮಾದಿಂದ ಹೊರಗುಳಿಯಬೇಕಾಯಿತು.
ಚಿರಶ್ರೀ ಅಂಚನ್, ನಿರಂಜನ್ ಛತ್ರಪತಿ, ಎಸ್ತರ್ ನರೋನ್ಹಾ
ಚಿರಶ್ರೀ ಅಂಚನ್, ನಿರಂಜನ್ ಛತ್ರಪತಿ, ಎಸ್ತರ್ ನರೋನ್ಹಾ

ಚಿರಶ್ರೀ ಅಂಚನ್ ಅವರು ಸಂದೇಶ್ ಶೆಟ್ಟಿ ಅಜ್ರಿ ಅವರ ಮುಂಬರುವ ನಿರ್ದೇಶನದ ಇನಾಮ್ದಾರ್‌ ಸಿನಿಮಾಗಾಗಿ ಸದ್ಯ ಸುದ್ದಿಯಾಗುತ್ತಿದ್ದಾರೆ. ಇದಕ್ಕೂ ಮೊದಲು, ಚಿತ್ರತಂಡ ಭೂಮಿ ಶೆಟ್ಟಿಯನ್ನು ಈ ಪಾತ್ರಕ್ಕಾಗಿ ಕರೆದಿದ್ದರು. ಆದರೆ, ಕಾಲಿನ ಗಾಯದಿಂದಾಗಿ ನಟಿಯು ಈ ಸಿನಿಮಾದಿಂದ ಹೊರಗುಳಿಯಬೇಕಾಯಿತು.

ತುಳು, ತಮಿಳು ಮತ್ತು ತೆಲುಗಿನಲ್ಲೂ ಕೆಲಸ ಮಾಡಿರುವ ಕಲ್ಪನಾ 2 ಚಿತ್ರದ ನಟಿ ಚಿರಶ್ರೀ, ನಿರಂಜನ್ ಛತ್ರಪತ್ರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಇನಾಮ್ದಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

'ಜನಾಂಗೀಯ ತಾರತಮ್ಯ, ಸಮಾನತೆ ಮತ್ತು ಭ್ರಾತೃತ್ವದ ಪರಿಕಲ್ಪನೆಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಚಿರಶ್ರೀ ಅಂಚನ್ ಮತ್ತು ಎಸ್ತರ್ ನರೋನ್ಹಾ ಪ್ರಬಲ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸದ್ಯ ಇನಾಮ್ದಾರ್ ಚಿತ್ರದ ಪೋಸ್ಟ್‌ಪ್ರೊಡಕ್ಷನ್‌ನಲ್ಲಿ ನಿರತರಾಗಿರುವ ನಿರ್ದೇಶಕರು ಹೇಳುತ್ತಾರೆ.

<strong>ಇನಾಮ್ದಾರ್ ಚಿತ್ರದ ಪೋಸ್ಟರ್</strong>
ಇನಾಮ್ದಾರ್ ಚಿತ್ರದ ಪೋಸ್ಟರ್

ಕುಂತಿಯಮ್ಮ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ನಿರಂಜನ್ ಶೆಟ್ಟಿ ತಲ್ಲೂರ್ ನಿರ್ಮಾಣದೊಂದಿಗೆ, ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಸಹ ನಾಯಕರಲ್ಲಿ ಒಬ್ಬರಾಗಿದ್ದಾರೆ. ಚಿತ್ರದಲ್ಲಿ ಶರತ್ ಲೋಹಿತಾಶ್ವ, ಅವಿನಾಶ್, ಥ್ರಿಲ್ಲರ್ ಮಂಜು, ಎಂಕೆ ಮಠ್, ಯಶ್ ಆಚಾರ್ಯ ಮತ್ತು ಕರಣ್ ಕುಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಕೇಶ್ ಆಚಾರ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಮತ್ತು ಎನ್ ಮುರಳಿ ಛಾಯಾಗ್ರಾಹಕರಾಗಿದ್ದಾರೆ. 'ನಾವು ಫೆಬ್ರವರಿ 2023 ರಲ್ಲಿ ಥಿಯೇಟರ್‌ಗೆ ಬರಲು ಯೋಜಿಸಿದ್ದೇವೆ' ಎಂದು ಸಂದೇಶ್ ಶೆಟ್ಟಿ ಅಜ್ರಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com