ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನ ನನಗೆ ಆತ್ಮವಿಶ್ವಾಸ ನೀಡಿದೆ: 'ಹೆಡ್ ಬುಷ್' ನಿರ್ದೇಶಕ ಶೂನ್ಯ

ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನ ನನಗೆ ಆತ್ಮವಿಶ್ವಾಸವನ್ನು ನೀಡಿದ್ದು, ಇದರಿಂದಲೇ ಸ್ವತಂತ್ರವಾಗಿ ಚಿತ್ರವನ್ನು ನಿರ್ದೇಶಿಸಿದೆ ಎಂದು ಹೆಡ್ ಬುಷ್ ನಿರ್ದೇಶಕ ಶೂನ್ಯ ಅವರು ಹೇಳಿದ್ದಾರೆ.
ಹೆಡ್ ಬುಷ್ ಚಿತ್ರದ ಸ್ಟಿಲ್
ಹೆಡ್ ಬುಷ್ ಚಿತ್ರದ ಸ್ಟಿಲ್

ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನ ನನಗೆ ಆತ್ಮವಿಶ್ವಾಸವನ್ನು ನೀಡಿದ್ದು, ಇದರಿಂದಲೇ ಸ್ವತಂತ್ರವಾಗಿ ಚಿತ್ರವನ್ನು ನಿರ್ದೇಶಿಸಿದೆ ಎಂದು ಹೆಡ್ ಬುಷ್ ನಿರ್ದೇಶಕ ಶೂನ್ಯ ಅವರು ಹೇಳಿದ್ದಾರೆ. 

ಚಿತ್ರದ ಕುರಿತು ಹಾಗೂ ತಮ್ಮ ಅನುಭವ ಕುರಿತು ಮಾತನಾಡಿರುವ ನಿರ್ದೇಶಕ ಶೂನ್ಯ, 2009 ರಿಂದ ಸಹಾಯಕ ನಿರ್ದೇಶಕನಾಗಿ ನಾನು ಕೆಲಸ ಮಾಡಿದ್ದೇನೆ. ರಕ್ಷಿತ್ ಶೆಟ್ಟಿ, ಸುನಿ, ಅರವಿಂದ್ ಶಾಸ್ತ್ರಿ, ಮತ್ತು ಪವನ್ ಕುಮಾರ್ ಅವರಂತಹ ಚಲನಚಿತ್ರ ನಿರ್ಮಾಪಕರೊಂದಿಗೆ ಸಹವರ್ತಿಯಾಗಿ ಕೆಲಸ ಮಾಡಿದ್ದೇನೆ. ಚಲನಚಿತ್ರ ನಿರ್ಮಾಣದಲ್ಲಿ ಎಂ.ಎಸ್'ಸಿ ಮಾಡಿದ್ದೇನೆ. ಪಿಹೆಚ್.ಡಿ ಅಂತಿಮ ವರ್ಷದಲ್ಲಿದೆ. ಶೈಕ್ಷಣಿಕ ಮತ್ತು ಪ್ರಾಯೋಗಿಕ ಜ್ಞಾನ ನನಗೆ ಆತ್ಮವಿಶ್ವಾಸವನ್ನು ನೀಡಿದ್ದು, ಇದರಿಂದಲೇ ಸ್ವತಂತ್ರವಾಗಿ ಚಿತ್ರವನ್ನು ನಿರ್ದೇಶಿಸಿದೆ ಎಂದು ಹೇಳಿದ್ದಾರೆ. 

ಅಲ್ಲದೆ, ತಮಗೆ ಸಿಕ್ಕಿರುವ ಮನ್ನಣೆಗಳನ್ನು ಶೂನ್ಯ ಅವರು ಅಗ್ನಿ ಶ್ರೀಧರ್ ಅವರಿಗೆ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಇಂದಿನವರೆಗೂ ಅವರು ನನ್ನನ್ನು ತಮ್ಮ ಮಗನಂತೆ ನೋಡುತ್ತಿದ್ದಾರೆ. ವಾಸ್ತವವಾಗಿ, ಅಗ್ನಿ ಶ್ರೀಧರ್ ಅವರಿಗೆ ಸಿನಿಮಾ ಮಾಡುವ ಯಾವುದೇ ಮನಸ್ಸಿರಲಿಲ್ಲ. ಅವರು ತಮ್ಮನ್ನು ಸಂಪೂರ್ಣವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದಾಗ್ಯೂ ನಾನು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೆ, ಅಂತಿಮವಾಗಿ, ಅವರು ಒಪ್ಪಿಕೊಂಡರು, ಬಳಿಕ ಹೆಡ್ ಬುಷ್ ಚಿತ್ರ ನಿರ್ದೇಶಿಸಲು ನಿರ್ಧರಿಸಿದ್ದೆ. ಅವರ ಸಹಾಯವನ್ನು ನಾನು ಅಪಕಾರವೆಂದೇ ತಿಳಿಯುವೆ. ಅಗ್ನಿ ಶ್ರೀಧರ್ ಅವರ ಆತ್ಮಕಥೆಯಾದ ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್ ಅನ್ನು ಆಳವಾಗಿ ಅಧ್ಯಯನ ಮಾಡಿ ಹೆಡ್ ಬುಷ್‌ ನಿರ್ದೇಶಿಸಲಾಗಿದೆ. ಚಿತ್ರ ನೈಜವಾಗಿದ್ದು, 1974-78ರ ಅವಧಿಯಲ್ಲಿ ನಡೆಗ ಘಟನೆಗಳಿಗೆ ಹತ್ತಿರವಾಗಿದೆ ಎಂದು ಚಿತ್ರದ ಕುರಿತು ಶೂನ್ಯ ಅವರು ವಿವರಿಸಿದ್ದಾರೆ. 

"ಪುಸ್ತಕವು 3 ಸಂಪುಟಗಳಲ್ಲಿ ಹೊರಬಂದಿದ್ದು, ಎರಡು ಭಾಗಗಳ ಹೆಡ್ ಬುಷ್‌ನ ಮೊದಲ ಭಾಗವು ಮೊದಲ ಸಂಪುಟವನ್ನು ಮಾತ್ರ ಪರಿಶೋಧಿಸುತ್ತದೆ. ಪ್ರೇಕ್ಷಕರ ಬೆಂಬಲದೊಂದಿಗೆ, ನಾವು ಖಂಡಿತವಾಗಿಯೂ ಈ ಜಗತ್ತನ್ನು ಇನ್ನಷ್ಟು ಅನ್ವೇಷಿಸಬಹುದು. 

ಚಿತ್ರದಲ್ಲಿ ಎಂಟು ನಾಯಕರು ಮತ್ತು ಇಬ್ಬರು ನಾಯಕಿಯರು ನಾಯಕರಾಗಿ ನಟಿಸಿದ್ದಾರೆ. ಅದರಲ್ಲಿ ಎಂಪಿ ಜಯರಾಜ್ ಆಗಿ ಧನಂಜಯ್, ಎಂಡಿಎನ್ ಆಗಿ ರಘು ಮುಖರ್ಜಿ, ಕೊತ್ವಾಲ್ ರಾಮಚಂದ್ರನಾಗಿ ವಸಿಷ್ಠ ಸಿಂಹ, ಗಂಗಾ ಆಗಿ ಯೋಗಿ, ಸ್ಯಾಮ್ಸನ್ ಆಗಿ ಬಾಲು ನಾಗೇಂದ್ರ, ಕೆಕೆ ರಾಜನಾಗಿ ರೋಷನ್ ಬಚ್ಚನ್, ಪ್ರೊಫೆಸರ್ ಆಗಿ ರವಿಚಂದ್ರನ್, ದೇವರಾಜ್, ಪೂರ್ಣಚಂದ್ರ ಮೈಸೂರು, ಶ್ರುತಿ ಹರಿಹರನ್ ಮತ್ತು ಪಾಯಲ್ ರಜಪೂತ್ ನಟಿಸಿದ್ದಾರೆ. 

ಇದರ ಹೊರತಾಗಿ, ಪ್ರಕಾಶ್ ಬೆಳವಾಡಿ, ಅಂಕಿತಾ ಮತ್ತು ಸಂಪತ್ ಅವರಂತಹ ಕೆಲವು ಕಲಾವಿದರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರತಂಡದ ಜೊತೆಗೆ, ಶೂಟಿಂಗ್ ಸಮಯದಲ್ಲಿ ನಾವು ಪ್ರತಿದಿನ ಕನಿಷ್ಠ 500 ಜೂನಿಯರ್ ಕಲಾವಿದರು ಕೆಲಸ ಮಾಡುತ್ತಿದ್ದಾರೆ. 

ನಿರ್ದೇಶನದ ಸಾಕಷ್ಟು ಸಮಯವನ್ನು ಎಂಜಾಯ್ ಮಾಡುತ್ತಿದ್ದೇವೆ. ಆದರೆ, ಅನುಮಾನಗಳಿಗೆ ಉತ್ತರಿಸುವುದೇ ಕಷ್ಟಕರವಾದ ಕೆಲಸವಾಗಿದೆ ಎಂದು ತಮ್ಮ ಅನುಭವವನ್ನು ಶೂನ್ಯ ಹಂಚಿಕೊಂಡಿದ್ದಾರೆ. 

ಹೆಡ್ ಬುಷ್ ಅಗ್ನಿ ಶ್ರೀಧರ್ ಅವರ ಆತ್ಮಕಥೆಯನ್ನು ಆಧರಿಸಿದ್ದು, ಇದು 70 ರ ದಶಕದ ಬೆಂಗಳೂರು ನಗರ ಮತ್ತು ಅಂದಿನ ಭೂಗತ ಜಗತ್ತು, ವಿಶೇಷವಾಗಿ ಸಂಸದ ಜಯರಾಜ್ ಅವರ ಜೀವನವನ್ನು ಆಧರಿಸಿದೆ. ಚಿತ್ರವು ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com