ಅಭಿಷೇಕ್ ಶೆಟ್ಟಿ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಅನೀಶ್ ನಾಯಕ ನಟ

ಬೆಂಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಅನೀಶ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ಅಭಿಷೇಕ್ ಶೆಟ್ಟಿ
ಅಭಿಷೇಕ್ ಶೆಟ್ಟಿ

ಬೆಂಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಅನೀಶ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಸಜ್ಜಾಗುತ್ತಿದ್ದಾರೆ.

<strong>ಅನೀಶ್</strong>
ಅನೀಶ್

ನಮ್ ಗಣಿ ಬಿ'ಕಾಂ ಪಾಸ್ ಮತ್ತು ಗಜಾನನ ಆ್ಯಂಡ್​ ಗ್ಯಾಂಗ್ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರು ನಿರ್ದೇಶಿಸುತ್ತಿರುವ ಆರಾಮ್ ಅರವಿಂದ್ ಸ್ವಾಮಿ ಎಂಬ ಹೆಸರಿನ ರೊಮ್-ಕಾಮ್‌ ಚಿತ್ರದಲ್ಲಿ ಅನೀಶ್ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ನಿರ್ದೇಶಕರು ಆರಂಭದಲ್ಲಿ ನಾಯಕನಾಗಿ ನಟಿಸಲು ಚಿಂತನೆ ನಡೆಸಿದ್ದರು. ಆದರೆ, ಇದೀಗ ಕ್ಯಾಮೆರಾ ಹಿಂದೆ ಕೆಲಸ ಮಾಡಲು ನಿರ್ಧರಿಸುವುದರಿಂದ ಚಿತ್ರಕ್ಕೆ ಹನೀಶ್ ಅವರನ್ನು ನಾಯಕ ನಟನಾಗಿ ಆಯ್ಕೆ ಮಾಡಿದ್ದಾರೆ.

ಚಿತ್ರಕ್ಕೆ ಅಕಿರಾ ಮತ್ತು ಗುಲ್ಟೂ ನಿರ್ಮಾಪಕರು ಜಂಟಿಯಾಗಿ ಬಂಡವಾಳ ಹೂಡಲಿದ್ದಾರೆ. ನವೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭಿಸಲು ಚಿತ್ರದ ತಂಡ ಚಿಂತನೆ ನಡೆಸಿದೆ. ಚಿತ್ರದ ಕುರಿತು ಡಿಸೆಂಬರ್ ನಲ್ಲಿ ಅಧಿೃಕೃತ ಮಾಹಿತಿಗಳು ಹೊರಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com