ಚಾಲೆಂಜಿಂಗ್ ಸ್ಟಾರ್ ದರ್ಶನ್ 56 ನೇ ಚಿತ್ರದ ಟೈಟಲ್ ರಿವೀಲ್: 'ಕಾಟೇರ' ಮೋಷನ್ ಪೋಸ್ಟರ್ ಲಾಂಚ್

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಮತ್ತು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56 ನೇ ಚಿತ್ರದ ಶೀರ್ಷಿಕೆಯನ್ನು ಕಾಟೇರ ಎಂದು ಘೋಷಿಸಲಾಗಿದೆ.
ಕಾಟೇರ ಸಿನಿಮಾ ಸ್ಟಿಲ್
ಕಾಟೇರ ಸಿನಿಮಾ ಸ್ಟಿಲ್
Updated on

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಮತ್ತು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56 ನೇ ಚಿತ್ರದ ಶೀರ್ಷಿಕೆಯನ್ನು ಕಾಟೇರ ಎಂದು ಘೋಷಿಸಲಾಗಿದೆ.

ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಿರ್ದೇಶಕರು ಟೈಟಲ್ ನ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಮಧ್ಯರಾತ್ರಿಯಲ್ಲಿ ಬಹಿರಂಗವಾದ  ಪೋಸ್ಟಪ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

ಮೊನ್ನೆಯಷ್ಟೇ ಪೋಸ್ಟರ್ ಮೂಲಕ ಹವಾ ಸೃಷ್ಟಿಸಿದ್ದ ನಿರ್ದೇಶಕರು, ಹೊಸ ಮೋಷನ್ ಪೋಸ್ಟರ್ ಟ್ರೆಂಡ್ ಮುಂದುವರೆಸಿದ್ದಾರೆ. ಕುತೂಹಲ ಕೆರಳಿಸುವ ಚಿತ್ರವು ಕುರಿಗಳ ಹಿಂಡನ್ನು ಮುನ್ನಡೆಸುವ ನಾಯಿಯನ್ನು ಒಳಗೊಂಡಿತ್ತು ಮತ್ತು "ಹಿಂದೆ ಹೋಗುವವರಿಗೆ ದಾರಿ ತೋರಿಸಲು ಮುನ್ನಡೆಸುವವರ ಜವಾಬ್ದಾರಿ" ಎಂದು ಶೀರ್ಷಿಕೆ ನೀಡಲಾಗಿದೆ.

ರಾಕ್‌ಲೈನ್‌ ವೆಂಕಟೇಶ್‌ ಅವರ ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಟೇರ’ ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. ಶೀರ್ಷಿಕೆ ಪೋಸ್ಟರ್‌ ಒಂದು ಬಾರಿ ಗಮನಿಸಿದರೆ, 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್‌ ಸುಧೀರ್‌, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಏಕೆಂದರೆ ಪೋಸ್ಟರ್‌ನಲ್ಲಿ ಪಾರ್ಲಿಮೆಂಟ್‌ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹವೂ ಕಾಣಿಸುತ್ತಿದೆ.

ಹಿಂದಿನ ಸಿನಿಮಾಗಳಲ್ಲಿನ ಖದರ್‌ ಅನ್ನು ಇಲ್ಲಿಯೂ ಮುಂದುವರಿಸಿರುವ ದರ್ಶನ್‌, ಮತ್ತೆ ಮತ್ತೆ ಲಾಂಗ್‌ ಹಿಡಿದು ರಗಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಪಂಚೆಯಲ್ಲಿ ಹಳ್ಳಿಗನಾಗಿ ಕಾಣಿಸಿದ್ದಷ್ಟೇ ಅಲ್ಲದೆ, ‘ಪ್ರತೀ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆಂದಾಗ..’ ಎಂಬ ಖಡಕ್‌ ಡೈಲಾಗ್‌ ಸಹ ಅವರ ಬಾಯಿಂದ ಹೊರಬಿದ್ದಿದೆ.  ಫೈರ್ ಎಫೆಕ್ಟ್‌ಗಳಿಂದ ತುಂಬಿರುವ ಮೋಷನ್ ಪೋಸ್ಟರ್, ಹಿನ್ನಲೆಯಲ್ಲಿ ಸುನಿತಾ ಎಸ್ ಮುರಳಿ ಹಾಡಿರುವ ಹೈ-ವೋಲ್ಟೇಜ್ ಹಾಡನ್ನು ಹೊಂದಿದೆ. ದರ್ಶನ್ ನೀಡಿದ ಪಂಚ್‌ಲೈನ್‌ನಿಂದ ಬೆಂಬಲಿತವಾದ ರಕ್ತದ ಕಲೆಯ ಮಚ್ಚೆಯ ದೃಶ್ಯವೂ ಇದೆ. ಹಣೆಯ ಮೇಲೆ ಕುಂಕುಮವನ್ನು ಧರಿಸಿ, ಉರಿಯುತ್ತಿರುವ ನೋಟದಲ್ಲಿ ಕಾಣುತ್ತಾರೆ. ಡಾರ್ಕ್ ಮೆರೂನ್ ಟಿ-ಶರ್ಟ್ ಮತ್ತು ಲುಂಗಿಯನ್ನು ಧರಿಸಿರುವ ದರ್ಶನ್ ಮಚ್ಚು  ಹಿಡಿದಿದ್ದಾರೆ.

“ಕಾಟೇರಮ್ಮ ಎಂಬ ಹೆಸರಿನ ದೇವತೆ ಇದೆ, ಕಾಟಿ ಕಾಡೆಮ್ಮೆಯ ಕನ್ನಡ ಹೆಸರೂ ಆಗಿದೆ, ಇದು ಕರ್ನಾಟಕದಲ್ಲಿ ಜನಪ್ರಿಯವಾಗಿದೆ. ಚಿತ್ರದ ಕಥೆಯು ಸೃಷ್ಟಿಸುವ ಪ್ರಬಲವಾದ ಪ್ರಭಾವಕ್ಕೆ ಕಾಟೇರಾ ಸರಿಹೊಂದುತ್ತದೆ, ”ಎಂದು ತರುಣ್ ಹೇಳುತ್ತಾರೆ, ಅವರು ಚಲನಚಿತ್ರವು ನೈಜತೆಯ ಪರಿಪೂರ್ಣ ಸಮತೋಲನ ಮತ್ತು ಅಗತ್ಯವಾದ ಕಮರ್ಷಿಯಲ್ ಅಂಶಗಳನ್ನು ಹೊಂದಿದೆ ಎಂದು ಹೇಳುತ್ತಾರೆ.

ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದರೆ, ಸುಧಾಕರ್‌ ಎಸ್‌. ರಾಜ್‌ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್‌ ಅವರ ಸಂಕಲನ, ಚಿತ್ರಕಥೆಯ ಜವಾಬ್ದಾರಿ ತರುಣ್‌ ಸುಧೀರ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಅವರದ್ದು. ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾ ರಾಮ್‌ ಕನ್ನಡಕ್ಕೆ ಪರಿಚಿತಗೊಳ್ಳುತ್ತಿದ್ದಾರೆ.

ಚೌಕ ಮತ್ತು ರಾಬರ್ಟ್ ನಂತರ ತರುಣ್ ಸುಧೀರ್ ಮತ್ತು ದರ್ಶನ್ ಮೂರನೇ ಬಾರಿಗೆ ಒಂದಾಗುತ್ತಿದ್ದಾರೆ. ಫೆಬ್ರವರಿ 22 ರಿಂದ ಶೂಟಿಂಗ್ ಆರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com