ಚಿತ್ರೀಕರಣ ಪೂರ್ಣಗೊಳಿಸಿದ ‘ಎವಿಡೆನ್ಸ್’: 'ಕಿರಗೂರಿನ ಗಯ್ಯಾಳಿಗಳು' ಖ್ಯಾತಿಯ ಮಾನಸ ನಾಯಕಿ

ಕ್ರೈಮ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳಿಂದ ತುಂಬಿರುವ 'ಎವಿಡೆನ್ಸ್' ಚಿತ್ರವನ್ನು ಬರಹಗಾರ ಪ್ರವೀಣ್ ರಾಮಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ.
ಎವಿಡೆನ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್
ಎವಿಡೆನ್ಸ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್
Updated on

ಕ್ರೈಮ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳಿಂದ ತುಂಬಿರುವ 'ಎವಿಡೆನ್ಸ್' ಚಿತ್ರವನ್ನು ಬರಹಗಾರ ಪ್ರವೀಣ್ ರಾಮಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ.

ಚಿತ್ರತಂಡ ಇದೀಗ ಚಿತ್ರದ ಪ್ರಚಾರಕ್ಕೆ ಸಜ್ಜಾಗಿದ್ದು, ಈ ತಿಂಗಳ ಕೊನೆಯಲ್ಲಿ ಟೀಸರ್ ಬಿಡುಗಡೆ ಮಾಡಲು ಯೋಜಿಸಿದೆ. ಚಿತ್ರದಲ್ಲಿ ರೋಬೊ ಗಣೇಶನ್ ಮತ್ತು ಕಿರಗೂರಿನ ಗಯ್ಯಾಳಿಗಳು ಸಿನಿಮಾ ಖ್ಯಾತಿಯ ಮಾನಸ ಜೋಶಿ ನಟಿಸಿದ್ದಾರೆ. ಇವರೊಂದಿಗೆ ಆದಿತ್ಯ, ರಚಿತಾ, ಪೂಜಿತ ಬೋಬೆ ಗೌಡ, ಚಮಕ್ ಚಂದ್ರ, ಪವನ್ ಸುರೇಶ್, ಶಶಿಧರ ಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ ಮತ್ತು ಆರಾಧ್ಯ ಶಿವಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿಜೆ ಅವರ ಹಿನ್ನೆಲೆ ಸಂಗೀತದೊಂದಿಗೆ, ಚಿತ್ರದ ನಾಲ್ಕು ಹಾಡುಗಳನ್ನು ಅರೋನ್ ಕಾರ್ತಿಕ್ ವೆಂಕಟೇಶ್ ಸಂಯೋಜಿಸಿದ್ದಾರೆ ಮತ್ತು ನಾಗೇಂದ್ರ ಪ್ರಸಾದ್, ಪ್ರವೀಣ್ ರಾಮಕೃಷ್ಣ ಮತ್ತು ಕಾರ್ತಿಕ್ ಸಾಹಿತ್ಯ ಬರೆದಿದ್ದಾರೆ.

ಅರವಿಂದ್ ಅಚ್ಚು ಅವರ ಬೆಂಬಲವಿರುವ ಎವಿಡೆನ್ಸ್‌ಗೆ ರವಿ ಸುವರ್ಣ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಚಿತ್ರತಂಡ ಎದುರು ನೋಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com