'ಭೀಮಾ' ಸಕ್ಸಸ್: ದುನಿಯಾ ವಿಜಯ್‌ ಹೊಸ ಸಿನಿಮಾ ಅನೌನ್ಸ್!

ಆರ್‌ಆರ್‌ ವೆಟ್ರಿ ವೇಲ್‌(ತಂಬಿ) ನಿರ್ದೇಶನದ ಚಿತ್ರಕ್ಕೆ ಕಥೆಯೂ ಅವರದ್ದೇ ಆಗಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರದ ಪೋಸ್ಟರ್‌ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ.
ದುನಿಯಾ ವಿಜಯ್, ವೆಟ್ರಿ ವೇಲ್‌
ದುನಿಯಾ ವಿಜಯ್, ವೆಟ್ರಿ ವೇಲ್‌
Updated on

ಆಗಸ್ಟ್ 9 ರಂದು ತೆರೆಕಂಡ ಭೀಮಾ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ದುನಿಯಾ ವಿಜಯ್ ಹೊಸ ಸಿನಿಮಾ ಘೋಷಿಸಿದ್ದಾರೆ. ತಮ್ಮ ಬಹು ಕಾಲದ ಸ್ನೇಹಿತ ಆರ್‌ಆರ್‌ ವೆಟ್ರಿ ವೇಲ್‌(ತಂಬಿ) ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.ಸದ್ಯಕ್ಕೆ ಈ ಸಿನಿಮಾಗೆ ‘VK 30’ ಎಂದರೆ ವಿಜಯ್‌ ಅವರ 30ನೇ ಸಿನಿಮಾ ಎಂಬ ಶೀರ್ಷಿಕೆ ಇಡಲಾಗಿದೆ.

ಆರ್‌ಆರ್‌ (ತಂಬಿ) ನಿರ್ದೇಶನದ ಚಿತ್ರಕ್ಕೆ ಕಥೆಯೂ ಅವರದ್ದೇ ಆಗಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರದ ಪೋಸ್ಟರ್‌ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನಡೆಯುವ ಕಥೆಯಂತಿದೆ ಚಿತ್ರದ ಪೋಸ್ಟರ್‌. ಇದು ಚಿತ್ರದ ಕಥೆಯ ಬಗ್ಗೆಯೂ ಕುತೂಹಲ ಹುಟ್ಟಿಸುವಂತಿದೆ. ಪ್ರಸ್ತುತ ‘ಕಾಟೇರ’ ಕಥೆಗಾರ ಜಡೇಶ್‌ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ತೊಡಗಿಸಿಕೊಂಡಿದ್ದಾರೆ. ಇದು ವಿಜಯ್‌ ನಟನೆ 29ನೇ ಸಿನಿಮಾವಾಗಿದೆ. ‘ಭೀಮ’ ಸಿನಿಮಾ ಸದ್ದು ಮಾಡುತ್ತಿರುವಾಗಲೇ ಹೊಸ ಸಿನಿಮಾ ಘೋಷಣೆಯಾಗಿದೆ. ‘ಸಲಗ’ ಹಾಗೂ ‘ಭೀಮ’ ಸಿನಿಮಾ ತಂಡವೇ ಈ ಹೊಸ ಸಿನಿಮಾದ ಭಾಗವಾಗಿರಲಿದೆ ಎಂದು ವಿಜಯ್‌ ಹೇಳಿದ್ದಾರೆ.

ಚಿತ್ರದ ಕಥೆಯನ್ನು ಗೌಪ್ಯವಾಗಿಟ್ಟಿರುವ ಅವರು, ಇದು ಮತ್ತೊಂದು ಗ್ಯಾಂಗ್ ಸ್ಟರ್ ಚಿತ್ರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ವಿಜಯ್ ತಮ್ಮ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ವೆಟ್ರಿ ನನ್ನೊಂದಿಗೆ ಇದ್ದಾರೆ ಮತ್ತು ನನ್ನ ನಟನೆಯ ಬಗ್ಗೆ ತುಂಬಾ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ನಾವು ಸಮಾನ ಮನಸ್ಕರಾಗಿದ್ದೇವೆ ಮತ್ತು ಸಹಾಯಕ ನಿರ್ದೇಶಕರನ್ನು ಯಾವುದೇ ಸಿನಿಮಾದ ಆಧಾರ ಸ್ತಂಭಗಳಲ್ಲಿ ಒಬ್ಬರು ಎಂದು ನಾನು ಪರಿಗಣಿಸುತ್ತೇನೆ. ವೆಟ್ರಿ ಅತ್ಯಂತ ಪ್ರತಿಭಾವಂತ, ನನ್ನೊಂದಿಗೆ ಕೆಲಸ ಮಾಡುವ ತಂತ್ರಜ್ಞರು ಬೆಳೆಯುವುದನ್ನು ನೋಡಲು ನಾನು ಯಾವಾಗಲೂ ಬಯಸುತ್ತೇನೆ. ನಾನು ಅವರನ್ನು ಪೋಷಿಸುವ ಗುರಿಯನ್ನು ಹೊಂದಿದ್ದೇನೆ ಎಂದಿದ್ದಾರೆ. ‘ಕಾಟೇರ’ ಕಥೆಗಾರ ಜಡೇಶ್‌ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ತೊಡಗಿಸಿಕೊಂಡಿದ್ದಾರೆ. ಇದು ವಿಜಯ್‌ ನಟನೆ 29ನೇ ಸಿನಿಮಾವಾಗಿದೆ. ಅವರ ಮುಂದಿನ ನಿರ್ದೇಶನದ ಬಗ್ಗೆ ಕೇಳಿದಾಗ, ವಿಜಯ್ ಅವರು ಸದ್ಯಕ್ಕೆ ನಟನೆಗೆ ಬದ್ಧರಾಗಿದ್ದಾರೆ ಮತ್ತು ನಿರ್ದೇಶಕರ ಕುರ್ಚಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ

ದುನಿಯಾ ವಿಜಯ್, ವೆಟ್ರಿ ವೇಲ್‌
'ಭೀಮಾ' ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ವಿಜಯ್ ಕುಮಾರ್ ಗೆ ಚಿರಋಣಿ: ಅಶ್ವಿನಿ ಅಂಬರೀಷ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com