ಮಾದೇವ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರದ್ದು ರಗಡ್ ಪಾತ್ರ!

ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಮತ್ತು ಇತರರ ಸಮ್ಮುಖದಲ್ಲಿ ಮಾದೇವ ಚಿತ್ರದ ಟೀಸರ್ ಅನಾವರಣಗೊಳಿಸಿದ ಕಾಟೇರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ವಿನೋದ್ ಪ್ರಭಾಕರ್ ನಿಜ ಜೀವನದ ಹೋರಾಟಗಾರ ಎಂದು ಹೇಳಿದರು.
ಮಾದೇವ ಚಿತ್ರತಂಡ
ಮಾದೇವ ಚಿತ್ರತಂಡ

ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಮತ್ತು ಇತರರ ಸಮ್ಮುಖದಲ್ಲಿ ಮಾದೇವ ಚಿತ್ರದ ಟೀಸರ್ ಅನಾವರಣಗೊಳಿಸಿದ ಕಾಟೇರ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ವಿನೋದ್ ಪ್ರಭಾಕರ್ ನಿಜ ಜೀವನದ ಹೋರಾಟಗಾರ ಎಂದು ಹೇಳಿದರು. ಇಡೀ ತಂಡಕ್ಕೆ ಶುಭ ಹಾರೈಸಿದ ತರುಣ್, ಚಿತ್ರದ ಪ್ರಸ್ತುತಿ ವಿಶೇಷವಾಗಿ ವಿನೋದ್ ಅವರ ಗಡ್ಡದ ನೋಟ ಆಕರ್ಷಕವಾಗಿದೆ ಎಂದರು.

ವಿನೋದ್ ಕೇವಲ ದೊಡ್ಡ ನಟ ಅಲ್ಲ. ಆದರೆ ಎಲ್ಲಕ್ಕಿಂತ ದೊಡ್ಡ ವ್ಯಕ್ತಿ ಎಂದು ಅಭಿಷೇಕ್ ಅಂಬರೀಶ್ ಹೇಳಿದರು. ಇನ್ನು ಚಿತ್ರದಲ್ಲಿ ವಿನೋದ್ ರಗಡ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಾದೇವನಲ್ಲಿ ವಿಶಿಷ್ಟವಾದ ಚಿತ್ರಣವಿದೆ. ಪಾತ್ರವನ್ನು 'ಭಾವನಾರಹಿತ' ಎಂದು ಮಾದೇವ ನಿರ್ದೇಶಕ ನವೀನ್ ರೆಡ್ಡಿ ವಿವರಿಸಿದರು.

ನವೀನ್ ಅವರು ಹಿರಿಯ ನಟಿ ಶ್ರುತಿ ಅವರ ಪಾತ್ರದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದರು. ಇಡೀ ಚಿತ್ರವು ವಿನೋದ್ ಪ್ರಭಾಕರ್ ಅವರ ಸುತ್ತ ಸುತ್ತುತ್ತದೆ. ಅವರು ಒರಟಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಚ್ಯುತ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸೋನಾಲ್ ಮಾಂಟೇರೊ ನಾಯಕಿಯಾಗಿ ಮತ್ತು ಕಿಟ್ಟಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರವು 1965, 1980 ಮತ್ತು 1999ರಲ್ಲಿ ನಡೆಯುತ್ತದೆ. ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮ್ ಸಿಟಿ ಮತ್ತು ಹೆಸರಘಟ್ಟ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಡಿಒಪಿ ಸೆಂಥಿಲ್ ಕುಮಾರ್ ಅವರೊಂದಿಗೆ ಕೆಲಸ ಮಾಡಿರುವ ಬಾಲಕೃಷ್ಣ ತೋಟ ಈ ಚಿತ್ರಕ್ಕೆ ಛಾಯಾಗ್ರಹಣ, ಪ್ರದ್ದೋತ್ತನ್ ಸಂಗೀತ ಸಂಯೋಜಕರು. ಚಿತ್ರತಂಡ ಮಾರ್ಚ್ ಅಂತ್ಯದಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com