ಶ್ರೀನಿಧಿ ಬೆಂಗಳೂರು 4ನೇ ತರಗತಿಯಲ್ಲಿರುವಾಗಲೇ ಕಲೆಯ ಮೇಲಿನ ಒಲವನ್ನು ಬೆಳೆಸಿಕೊಂಡು ಬಂದಿದ್ದಾರೆ. ಸುರೇಶ ಆನಗಳ್ಳಿ ಮಾರ್ಗದರ್ಶನದ 'ಅನೇಕ' ರಂಗತಂಡದ ಭಾಗವಾಗಿ 27 ನಾಟಕಗಳಲ್ಲಿ ಭಾಗವಹಿಸಿದ್ದಾರೆ ಮತ್ತು 600 ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಕಲೆಯ ಜಗತ್ತಿನಲ್ಲಿ ಅವರ ಪ್ರಯಾಣವು ಅಲ್ಲಿಗೆ ಕೊನೆಗೊಳ್ಳುವುದಿಲ್ಲ; ಅವರು ಬೀದಿ ನಾಟಕಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ ಮತ್ತು ಅಭಿಜ್ಞಾ ಎಂಬ ತಮ್ಮದೇ ಆದ ನಾಟಕ ತಂಡವನ್ನು ಕಟ್ಟಿದ್ದಾರೆ.
ಕುತೂಹಲಕಾರಿಯಾಗಿ ಶ್ರೀನಿಧಿ ಅವರ ಉತ್ಸಾಹ ವೇದಿಕೆಯನ್ನು ಮೀರಿ ಬೆಳ್ಳಿತೆರೆಗೆ ವಿಸ್ತರಿಸಿದೆ. ಏಕೆಂದರೆ ಅವರು ಬ್ಲಿಂಕ್ನೊಂದಿಗೆ ಚೊಚ್ಚಲ ನಿರ್ದೇಶನದ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ರವಿಚಂದ್ರನ್ ಅಜ್ ನಿರ್ಮಾಣದ ಚಿತ್ರವು ಕೆಟಿಎಂ ನಂತರ ದೀಕ್ಷಿತ್ ಶೆಟ್ಟಿಯವರ ಮುಂದಿನ ಚಿತ್ರವಾಗಿದೆ ಮತ್ತು ಸುರೇಶ್ ಆನಗಳ್ಳಿ, ವಜ್ರಧನ ಅವರೊಂದಿಗೆ ಚೈತ್ರ ಆಚಾರ್, ಮಂದಾರ ಬಟ್ಟಲಹಳ್ಳಿ, ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಬ್ಲಿಂಕ್ ನೊಂದಿಗೆ ರಂಗಭೂಮಿಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಕುರಿತು ಶ್ರೀನಿಧಿ ಬೆಂಗಳೂರು ಸಿನಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದರು. ನಾನು ರಂಗಭೂಮಿಯನ್ನು ಬಿಟ್ಟಿಲ್ಲ. ಇತ್ತೀಚೆಗೆ ನಾನೇ ನಾಟಕ ಬರೆದು ನಿರ್ದೇಶಿಸಿದ್ದೆ. ರಂಗಭೂಮಿ ನನಗೆ ಭದ್ರ ಬುನಾದಿ ಹಾಕಿದೆ. ಸಿನಿಮಾ ಬಗ್ಗೆ ನನ್ನ ಒಲವು ಬೆಳೆದಿದೆ. ಸಂಪಾದಕ ಸಂಜೀವ್ ಜಾಗೀರದಾರ್, ಡಿಒಪಿ ಅವಿನಾಶ ಶಾಸ್ತ್ರಿ, ಸಂಗೀತ ನಿರ್ದೇಶಕ ಪ್ರಸನ್ನಕುಮಾರ್ ಎಂಎಸ್, ನಟ ದೀಕ್ಷಿತ್ ಶೆಟ್ಟಿ ಸೇರಿದಂತೆ ನನ್ನ ಅನೇಕ ಗೆಳೆಯರು ರಂಗಭೂಮಿಯ ಮೂಲಕ ನನಗೆ ಪರಿಚಯವಾದವರು. ಬ್ಲಿಂಕ್ ರಚಿಸಲು ನಾವೆಲ್ಲರೂ ಒಗ್ಗೂಡಿದ್ದೇವೆ ಎಂದು ತಿಳಿಸಿದರು.
ಮೊದಲ ಬಾರಿಗೆ ನಿರ್ದೇಶಕರಾಗಿರುವ, ಶ್ರೀನಿಧಿ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಪ್ರಕಾರಗಳ ಕೊರತೆಯಿದೆ ಎಂದು ಭಾವಿಸುತ್ತಾರೆ ಮತ್ತು ನಿರ್ದೇಶಕರು ಹೊಸ ರೀತಿಯ ಚಲನಚಿತ್ರ ಅನ್ವೇಷಿಸಲು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. "ಬ್ಲಿಂಕ್ ನೊಂದಿಗೆ ಕಥೆಗೆ ವೈಜ್ಞಾನಿಕ ಮತ್ತು ರೋಮಾಂಚಕ ಅಂಶಗಳನ್ನು ತುಂಬಿದ್ದೇನೆ, ಅದು ಕನ್ನಡ ಚಿತ್ರರಂಗದಲ್ಲಿ ಇನ್ನೂ ಗುರುತಿಸಲಾಗದ ಪ್ರದೇಶವಾಗಿದೆ" ಎಂದು ಅವರು ವಿವರಿಸಿದರು.
ಶ್ರೀನಿಧಿ ಪ್ರಕಾರ, ಸಂಗೀತವು ಬ್ಲಿಂಕ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. “ಕಂಪ್ಯೂಟರ್-ರಚಿತ ಮತ್ತು ಎಲೆಕ್ಟ್ರಾನಿಕ್ ಸಂಗೀತದ ಇಂದಿನ ಪ್ರವೃತ್ತಿಗಿಂತ ಭಿನ್ನವಾಗಿ, ಮ್ಯಾಂಡೋಲಿನ್, ರುಬಾಬ್ ಮತ್ತು ತಾಳವಾದ್ಯ ಸೇರಿದಂತೆ ನೇರ ವಾದ್ಯಗಳನ್ನು ಆರಿಸಿಕೊಂಡಿದ್ದೇವೆ. ಇಂತಹ 17 ವಾದ್ಯ ಬಳಸಿ ಐದು ಹಾಡುಗಳನ್ನು ಸಂಯೋಜಿಸಿದ್ದೇವೆ ಎಂದು ಅವರು ತಿಳಿಸಿದರು.
ಶ್ರೀನಿಧಿ ಬ್ಲಿಂಕ್ ಚಿತ್ರದೊಂದಿಗೆ ಹೊಸ ವಿಧಾನವನ್ನು ತೆಗೆದುಕೊಂಡಿದ್ದು,ಕನ್ನಡ ಸಿನಿಮಾ ಮಾದರಿಯನ್ನು ಅನುಸರಿಸಿಲ್ಲ. ಬದಲಾಗಿ, ನನ್ನ ಸ್ನೇಹಿತರ ಜೊತೆಯಲ್ಲಿ, ನಾವು ಈ ಯೋಜನೆಯೊಂದಿಗೆ ಚಲನಚಿತ್ರ ನಿರ್ಮಾಣದ ನಿಯಮಗಳನ್ನು ಪುನಃ ಬರೆಯಲು ಧೈರ್ಯ ಮಾಡಿದ್ದೇವೆ ಎಂದು ಅವರು ಪ್ರತಿಪಾದಿಸುತ್ತಾರೆ.
Advertisement