ಬೆಂಗಳೂರು: ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ; ಕಿರುತೆರೆ ನಟಿ ಲಕ್ಷ್ಮಿ ವಿರುದ್ಧ ಆರೋಪ!

ಆಕ್ಸಿಡೆಂಟ್ ಮಾಡಿದ್ದಲ್ಲದೇ, ಯುವತಿಯರ ಜೊತೆ ನಡುರಸ್ತೆಯಲ್ಲೇ ಲಕ್ಷ್ಮಿ ರಂಪಾಟ ಮಾಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಕ್ಷ್ಮಿ ಸಿದ್ದಯ್ಯ
ಲಕ್ಷ್ಮಿ ಸಿದ್ದಯ್ಯ

ಕನ್ನಡದ ಕಿರುತೆರೆ ಮತ್ತು ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಮೇಲೆ ಗುರುತರ ಆರೋಪ ಬಂದಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ, ಯುವತಿಯರ ಜೊತೆ ನಡುರಸ್ತೆಯಲ್ಲೇ ಲಕ್ಷ್ಮಿ ರಂಪಾಟ ಮಾಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ ಕೂಡ ನಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆ ನಡೆದು ಮೂರು ಬರೋಬ್ಬರಿ ಮೂರು ತಿಂಗಳಾಗಿದೆ. ಲಕ್ಷ್ಮಿ ಸಿದ್ದಯ್ಯ ಹೆಸರಿನ ಕಿರುತೆರೆ ನಟಿ ತನ್ನ ಕಾರನ್ನು ಸ್ಕೂಟರ್ ಒಂದಕ್ಕೆ ಗುದ್ದಿ ರಂಪಾಟ ನಡೆಸಿದ ಪ್ರಸಂಗ ಈಗ ಬಯಲಾಗಿದೆ.

ಡಿಸೆಂಬರ್ 6 ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಲಕ್ಷ್ಮಿ ತಮ್ಮ ಕಾರಿನ ಮುಂದೆ ಸಾಗುತ್ತಿದ್ದ ಸ್ಕೂಟರ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನ ಓಡಿಸುತ್ತಿದ್ದ ಮಾಧುರಿ ಮತ್ತು ಅವರ ಸಹೋದರಿ ಐಶ್ವರ್ಯ ನೆಲಕ್ಕೆ ಬಿದ್ದು ತಲೆ ಮತ್ತು ದೇಹದ ಬೇರೆ ಭಾಗಗಳಲ್ಲಿ ಪೆಟ್ಟಾಗಿದೆ.

ಲಕ್ಷ್ಮಿ ಸಿದ್ದಯ್ಯ
ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಕಿರುತೆರೆ ನಟನಿಗೆ ವಂಚನೆ: ನಟಿ ಉಷಾ ಬಂಧನ

ತಪ್ಪು ತನ್ನದೇ ಆದರೂ ಲಕ್ಷ್ಮಿ ಸೋದರಿಯ ಮೇಲೆ ರೇಗಾಡಿ ಹಲ್ಲೆ ಕೂಡ ನಡೆಸಿದ್ದಾರೆ. ಮಾಧುರಿ ತಮ್ಮ ಮೊಬೈಲ್ ನಲ್ಲಿ ಲಕ್ಷ್ಮಿಯ ರಂಪಾಟ ಮಾಡುತ್ತಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಮುಂದಾದಾಗ ಪಾನಮತ್ತರಾಗಿದ್ದ ನಟಿ ಅದನ್ನು ಕಿತ್ತುಕೊಂಡು ರೆಕಾರ್ಡಿಂಗ್ ಡಿಲೀಟ್ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸೋದರಿಯರ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಲಕ್ಷ್ಮಿ ಸಿದ್ದಯ್ಯ ಅವಾಚ್ಯ ಪದಗಳಲ್ಲಿ ತನ್ನ ಮಕ್ಕಳನ್ನು ಬೈದಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com