MeToo ನಂತರ ಹೆಚ್ಚಾಯ್ತು ಕಿರುಕುಳ: 'ಮಾಂಗಲ್ಯಸರ' ಕುರಿತ ಪತಿಯ ಹೇಳಿಕೆ ಬಳಿಕ ಗಾಯಕಿಯ ನಗ್ನ ಫೋಟೋ ವೈರಲ್

ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಉದ್ಯಮಿ ಚಿನ್ಮಯಿ ಶ್ರೀಪಾದ ಅವರಿಗೆ ಯಾರೋ ಮಾರ್ಫ್ ಮಾಡಿದ ನಗ್ನ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದು ಅವರು ಆಘಾತಕ್ಕೊಳಗಾಗಿದ್ದಾರೆ.
ಚಿನ್ಮಯಿ ಶ್ರೀಪಾದ
ಚಿನ್ಮಯಿ ಶ್ರೀಪಾದ
Updated on

ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಉದ್ಯಮಿ ಚಿನ್ಮಯಿ ಶ್ರೀಪಾದ ಅವರಿಗೆ ಯಾರೋ ಮಾರ್ಫ್ ಮಾಡಿದ ನಗ್ನ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದು ಅವರು ಆಘಾತಕ್ಕೊಳಗಾಗಿದ್ದಾರೆ. ಇದಲ್ಲದೆ ದುಷ್ಕರ್ಮಿಗಳು ತಮ್ಮ ಮಕ್ಕಳನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಡಿಸೆಂಬರ್ 10ರಂದು ಈ ಘಟನೆ ನಡೆದಿದ್ದು ಈ ವಿಷಯವನ್ನು ಚಿನ್ಮಯಿ ಶ್ರೀಪಾದರು ತಕ್ಷಣವೇ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೇ ತಾವು ಎದುರಿಸುತ್ತಿರುವ ಆನ್‌ಲೈನ್ ನಿಂದನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದರು.

ಚಿನ್ಮಯಿ ಶ್ರೀಪಾದರನ್ನು ಕೆಲವು ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಯಾವ ಕಾರಣಕ್ಕೆ ಅಂತ ಅವರಿಗೂ ಗೊತ್ತಿಲ್ಲ. ಆದಾಗ್ಯೂ, ಚಿನ್ಮಯಿ ಅವರ ಪತಿ ರಾಹುಲ್ ರವೀಂದ್ರನ್ ಈ ಹಿಂದೆ ಮಂಗಳಸೂತ್ರದ ಬಗ್ಗೆ ಕಾಮೆಂಟ್ ಮಾಡಿದಾಗಿನಿಂದ ಅವರು ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಚಿನ್ಮಯಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಈಗ ಪರಿಸ್ಥಿತಿ ಆತಂಕಕಾಗಿ ತಿರುವು ಪಡೆದುಕೊಂಡಿದೆ. ಯಾರೋ ಚಿನ್ಮಯಿ ಶ್ರೀಪಾದರಿಗೆ ತಮ್ಮ ಮಾರ್ಫ್ ಮಾಡಿದ ಫೋಟೋವನ್ನು ಕಳುಹಿಸಿದ್ದು ಪರಿಸ್ಥಿತಿ ಎಲ್ಲೆ ಮೀರಿದೆ.

ಚಿನ್ಮಯಿ ಶ್ರೀಪಾದರು ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇಂದು ನನಗೆ ಒಂದು ಪೇಜ್ ನಿಂದ ಮಾರ್ಫ್ ಮಾಡಿದ ಫೋಟೋ ಬಂದಿದೆ. ನಾನು ಅದನ್ನು ಪೊಲೀಸರಿಗೆ ಟ್ಯಾಗ್ ಮಾಡಿದ್ದೇನೆ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ವಿಷಯವಲ್ಲ ಎಂದು ಬರೆದಿದ್ದಾರೆ. ಅವರು ವೀಡಿಯೊ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ. ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ನನ್ನ ಮಕ್ಕಳ ವಿರುದ್ಧ ನನಗೆ ಕೊಲೆ ಬೆದರಿಕೆ ಬಂದಿದೆ. ಟ್ವಿಟರ್ (ಎಕ್ಸ್) ಸ್ಪೇಸ್‌ನಲ್ಲಿ ತಮಗೆ ಇಷ್ಟವಿಲ್ಲದ ಮಹಿಳೆಯರು ಎಂದಿಗೂ ಮಕ್ಕಳನ್ನು ಹೊಂದಬಾರದು ಮತ್ತು ಅವರು ಮಕ್ಕಳನ್ನು ಹೊಂದಿದ್ದರೆ ಅವರ ಮಕ್ಕಳು ಸಾಯಬೇಕು ಎಂದು ಕಮೆಂಟ್ ಮಾಡಿದ್ದ ಕೆಲವರ ವಿರುದ್ಧ ನಾನು ಪೊಲೀಸ್ ದೂರು ದಾಖಲಿಸಿದ್ದೇನೆ. ಕೆಲವು ಪುರುಷರು ಚಪ್ಪಾಳೆ ತಟ್ಟುವ ಮತ್ತು ನಗುವ ಇಮೋಜಿಗಳನ್ನು ಹಾಕಿದ್ದಾರೆ.

ವರ್ಷಗಳ ಹಿಂದೆ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತಿದಾಗಿನಿಂದ ತಮ್ಮನ್ನು ಹೇಗೆ ನಿರಂತರವಾಗಿ ಗುರಿಯಾಗಿಸಿಕೊಂಡು ನಿಂದಿಸಲಾಗಿದೆ ಎಂಬುದನ್ನು ಚಿನ್ಮಯಿ ಶ್ರೀಪಾದರು ವಿವರಿಸಿದ್ದಾರೆ. ಅನೇಕರು ನನ್ನನ್ನು ನಿಂದಿಸಿದ್ದಾರೆ. ಅವರಿಗೆ ರಾಜಕೀಯ ಗುಂಪುಗಳು ಹಣ ನೀಡಿವೆ. ಇಂದು, ನನ್ನ ಮಾರ್ಫ್ ಮಾಡಿದ ನಗ್ನ ಫೋಟೋವನ್ನು ಹಂಚಿಕೊಳ್ಳುವ ಟ್ವೀಟ್ ಕಾಣಿಸಿಕೊಂಡಿದೆ. ಅಂತಹ ವಿಷಯಗಳು ನಡೆಯುತ್ತವೆ ಎಂದು ಮಹಿಳೆಯರಿಗೆ ತಿಳಿಸಲು ನಾನು ಅದನ್ನು ಹಂಚಿಕೊಳ್ಳುತ್ತಿದ್ದೇನೆ. ಸಾರ್ವಜನಿಕ ಸ್ಥಳಗಳಿಂದ ನಮ್ಮನ್ನು ಹೊರಹಾಕಲು ಪುರುಷರು ಇದನ್ನು ಮಾಡುತ್ತಾರೆ.

ಚಿನ್ಮಯಿ ಶ್ರೀಪಾದ
'ಡೆವಿಲ್' ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟ; ಸಸ್ಪೆನ್ಸ್ ಥ್ರಿಲ್ಲರ್ 'ಸರ್ಕಾರಿ ಶಾಲೆ-ಎಚ್ 8' ರಲ್ಲಿ ಪ್ರಮುಖ ಪಾತ್ರ!

ಡೀಪ್‌ಫೇಕ್‌ಗಳು ಮತ್ತು AI-ಸಕ್ರಿಯಗೊಳಿಸಿದ ಕಿರುಕುಳದ ಅಪಾಯಗಳನ್ನು ಚಿನ್ಮಯಿ ಶ್ರೀಪಾದರು ಎತ್ತಿ ತೋರಿಸಿದರು ಮತ್ತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಇದರಿಂದ ಮುಜುಗರಕ್ಕೊಳಗಾಗಬೇಕಾದ ಮಹಿಳೆಯರಲ್ಲಿ ನಾನು ಒಬ್ಬಳಲ್ಲ. ಮಹಿಳೆಯರು, ಹುಡುಗಿಯರು ಮತ್ತು ಪೋಷಕರು ಇದೇ ರೀತಿಯ ದಾಳಿಗಳನ್ನು ಎದುರಿಸಿದರೆ ಕಾನೂನು ದೂರು ದಾಖಲಿಸಲು ಮುಕ್ತವಾಗಿರಿ ಎಂದು ನಾನು ಒತ್ತಾಯಿಸುತ್ತೇನೆ ಎಂದರು.

#MeToo ಹೋರಾಟ ನಂತರ ಹೆಚ್ಚು ಸುದ್ದಿಗೆ ಗ್ರಾಸವಾದರು. #MeToo ಹೋರಾಟದಲ್ಲಿ ಚಿನ್ಮಯಿ ಶ್ರೀಪಾದರು ಪ್ರಮುಖ ವ್ಯಕ್ತಿಯಾಗಿದ್ದರು ಎಂಬುದು ಗಮನಿಸಬೇಕಾದ ಸಂಗತಿ. 2018ರಲ್ಲಿ ಅವರು ಗೀತರಚನೆಕಾರ ವೈರಮುತ್ತು ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com