ಲೇ ಮುಠಾಳ ಅರ್ಥ ಮಾಡ್ಕೋ, ಯೋಗತ್ಯೆ ಇದ್ದವರಿಗೆ ಎಲ್ಲವೂ ಸಿಗುತ್ತೆ: ಚೇತನ್ ಅಹಿಂಸಾ ವಿರುದ್ಧ ಸಾರಾ ಗೋವಿಂದ್ ಆಕ್ರೋಶ!

ವರನಟ ಡಾ. ರಾಜ್​ಕುಮಾರ್ ಸ್ಮಾರಕದ ಬಗ್ಗೆ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಮಾಡಿದ್ದ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಚೇತನ್ ಅಹಿಂಸ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ
Chetan Ahimsa-Sara Govindu
ಚೇತನ್ ಅಹಿಂಸಾ-ಸಾರಾ ಗೋವಿಂದ್
Updated on

ವರನಟ ಡಾ. ರಾಜ್​ಕುಮಾರ್ ಸ್ಮಾರಕದ ಬಗ್ಗೆ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಮಾಡಿದ್ದ ಪೋಸ್ಟ್​​ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳ ಸಂಘಗಳು ಚೇತನ್ ಅಹಿಂಸ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಈಗಾಗಲೇ ದೂರು ಸಹ ನೀಡಿವೆ. ಮತ್ತೊಂದೆಡೆ, ರಾಜ್​ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನಾಡಿದ್ದು, ಚೇತನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್​ಕುಮಾರ್ ಬಗ್ಗೆ ಆಗಲಿ, ಅವರ ಸಾಧನೆ, ಸೇವೆಯ ಬಗ್ಗೆ ಆತನಿಗೆ ಎಳ್ಳಷ್ಟೂ ಗೊತ್ತಿಲ್ಲ. ಸಾಮಾಜಿಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಅವನನ್ನು ಕೂಡಲೇ ಗಡಿಪಾರು ಮಾಡಬೇಕು. ಅವನು ರಾಜ್ಯದಲ್ಲೇ ಇದ್ದರೆ, ಅವನನ್ನು ಬದುಕಲು ಬಿಡಲ್ಲ. ಈ ಬಾರಿ ಜನ, ಅಭಿಮಾನಿಗಳು ಸುಮ್ಮನೆ ಬಿಡಲ್ಲ ಎಂದು ಸಾರಾ ಗೋವಿಂದು ಹೇಳಿದ್ದಾರೆ.

ಇನ್ನು ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಹಾದಿ ಬೀದಿಯಲ್ಲಿ ಬೇಡಿಕೊಂಡು ತಿಂತಾನೇ? ನೀನು ಮೇರು ನಟರ ಬಗ್ಗೆ ಮಾತನಾಡುತ್ತೀಯ. ನಾವು ಸರ್ಕಾರದ ಮೇಲೆ ಒತ್ತಡ ಹಾಕುತ್ತೀವಿ, ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು ಎಂದು ಹೇಳಿದರು. ಇಷ್ಟಕ್ಕೆ ಸುಮ್ಮನಾಗದ ಸಾರಾ ಗೋವಿಂದು ಕನ್ನಡ ಹೋರಾಟಗಾರರ ಜೊತೆ ಸೇರಿ ಚೇತನ್ ಅಹಿಂಸಾ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

Chetan Ahimsa-Sara Govindu
ರಾಜ್‌ಕುಮಾರ್ ಸ್ಮಾರಕಕ್ಕೆ 2.5 ಎಕರೆ ಸರ್ಕಾರಿ ಜಾಗ ಯಾಕೆ?: ನಟ ಚೇತನ್ ಅಹಿಂಸಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com