(ಈ ಒಂದು ಘಟನೆ ಸಾಕು ನಮ್ಮದೇನೂ ನಡೆಯುವುದಿಲ್ಲ ಎಂದು ಹೇಳುವುದಕ್ಕೆ. ದೇವರುಗಳನ್ನು ಒಲಿಸಿದೆವೆಂಬ ಸಂತಸಕ್ಕಾಗಲಿ, ನಮ್ಮ ಕಾರ್ಯಗಳಲ್ಲಿ ಎಡವುತ್ತಿದ್ದೇವೆಂಬ ನೋವಿಗಾಗಲಿ ನಾವು ಕಾರಣರಲ್ಲ . ಈ ಸೋಲು ಗೆಲುವುಗಳೆರಡೂ ನಮ್ಮ ಕೈಯ್ಯಲ್ಲಿಲ್ಲ. ಯಾವುದು ದೈವದಿಂದ ಕರುಣಿಸಲ್ಪಡುತ್ತದೆಯೋ , ಅದರಲ್ಲಷ್ಟೇ ನಾವು ನಿಷ್ಠೆಯಿಂದ ಕಾರ್ಯ ತತ್ಪರರಾಗಬೇಕು. ತಪಸ್ಸು ನಮ್ಮದೇ ಇದ್ದರೂ, ಬ್ರಹ್ಮದೇವನೇ ಪ್ರಾರ್ಥಿಸ ಹೇಳಿದ್ದರೂ ಕುಪ್ರಾರ್ಥನೆ, ಸುಪ್ರಾರ್ಥನೆ ಈ ಎರಡೂ ಅರ್ಥಹೀನವೆಂದೇ ಭಾಸವಾಗುತ್ತದೆ. ಪಾಪ ದಶಕಂಠ ಬಾಯಿಬಿಟ್ಟು ಕೇಳಿದ ಅಮರತ್ವವನ್ನು. ಸಾವು ಅನುಲ್ಲಂಘನೀಯ, ಅಪವಾದ ರಹಿತ ಎಂದೆಲ್ಲ ಭಾಷಣ ಬಿಗಿದು, ಅವನಿಗೆ ಅಮರ್ತ್ಯ ಸ್ಥಿತಿ ಕೊಡದೆ, ಕೇಳದೇ ಇದ್ದರೂ ವಿಭೀಷಣನಿಗೆ ಸ್ಥಿರಂಜೀವಿತ್ವವನ್ನಿತ್ತ ! ಕುಂಭಕರ್ಣನಿಗೆ ಮೊಂಕು ಕವಿಸಿ ನಿದ್ದೆ ಮಾಡಿಸಿದ . ನಾವೇನು ಮಾಡಬಲ್ಲೆವು? ನಾವೇನು ಸಾಧಿಸಬಲ್ಲೆವು? ಎಲ್ಲವೂ ವಿಧಿಯದೇ ಆಗಿದ್ದಾಗ)