ಹೀಗೆ ವಸೂಲಾಗದೆ ಉಳಿದ ಸಾಲದ ಮೊತ್ತ ಹೆಚ್ಚಿದಷ್ಟು ಗ್ರಾಹಕನಿಗೆ, ಬ್ಯಾಂಕ್ ಷೇರು ಖರೀದಿ ಮಾಡುವ ಹೂಡಿಕೆದಾರನಿಗೆ ಎಲ್ಲರಿಗೂ ಬ್ಯಾಂಕ್ನ ಮೇಲಿನ ನಂಬಿಕೆ ಕಡಿಮೆ ಆಗುತ್ತದೆ. ನಾನು ಇಟ್ಟ ಹಣ ನನ್ನ ಸಮಯಕ್ಕೆ ಮರಳಿ ದೊರಕುವುದೇ ಎನ್ನುವ ಪ್ರಶ್ನೆ ಹುಟ್ಟಿದರೆ ಮುಗಿಯಿತು, ನೆನಪಿಡಿ ವಿತ್ತ ವಲಯ ಕಾರ್ಯ ನಿರ್ವಹಿಸುತ್ತಿರುವುದು ನಂಬಿಕೆಯ ಆಧಾರದ ಮೇಲೆ. ಗ್ರಾಹಕನ ನಂಬಿಕೆಗೆ ಪೆಟ್ಟು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ಉದಾಹರಣೆ ಅರ್ಜೆಂಟಿನ, ಐಸ್ಲ್ಯಾಂಡ್, ಸೈಪ್ರಸ್, ಗ್ರೀಸ್, ಸ್ಪೇನ್ ದೇಶಗಳು ನಮ್ಮ ಕಣ್ಣ ಮುಂದಿದೆ. ಈ ದೇಶಗಳಲ್ಲಿ ಠೆವಣಿ ಇಟ್ಟ ವ್ಯಕ್ತಿ ತನ್ನ ಹಣ ವಾಪಸ್ಸು ಕೇಳಿದರೆ ಬ್ಯಾಂಕ್ ತನ್ನ ಬಳಿ ನೀನಿಟ್ಟ ಹಣ ಇಲ್ಲ ಎಂದಿವೆ, 100 ರುಪಾಯಿ ನಿಡುವ ಕಡೆ 3೦/4೦ ರುಪಾಯಿ ಕೊಟ್ಟು ಉಳಿದದ್ದು ಕೊಡುತ್ತೇವೆ ಎಂದಿವೆ, ಎಂದು ಎನ್ನುವುದು ಯಕ್ಷ ಪ್ರಶ್ನೆ.