ತುಂಬ ಅಸಹನೆಯಿಂದ ಶ್ರೀರಾಮರು ಕೂಗಿಬಿಟ್ಟರು, " ನಿಲ್ಲಿ ನಿಲ್ಲಿ! ಯಾರಿಗೆ ಕೊಡಬೇಕೆಂದಿದ್ದಾರೆ ಇದನ್ನೆಲ್ಲ? ನಿಮ್ಮ ರಾಜರು ಹೇಡಿ ಅಳಿಯನಿಗೋ, ದುರಾಶಾ ಅಳಿಯನಿಗೋ, ದುರ್ಬಲ ಅಳಿಯನಿಗೋ, ಪರಾವಲಂಬಿ ಅಳಿಯನಿಗೋ ತಮ್ಮ ಮಗಳನ್ನು ಕೊಡುತ್ತಿಲ್ಲ ತಾನೇ? ಏನು ಇಷ್ಟೆಲ್ಲಾ ಕೊಟ್ಟು ನನ್ನನ್ನು ಕೊಂಡುಕೊಳ್ಳಬೇಕೆಂದಿದ್ದಾರೋ? ನನ್ನ ಹೆಂಡತಿಯನ್ನು ಸಾಕಲು ಯೋಗ್ಯತೆಯಿಲ್ಲದ ಗಂಡೇನು ನಾನು? ನನ್ನ ಹಿನ್ನೆಲೆಯೂ ಚನ್ನಾಗಿದೆ, ಅಕಸ್ಮಾತ್ ನಮ್ಮ ಮನೆ ಸಿರಿಮನೆಯಲ್ಲದಿದ್ದರೂ ಈ ಯಾವುದನ್ನೂ ನಾನು ಮುಟ್ಟುತ್ತಿರಲಿಲ್ಲ. ಏಕೆ? ನಿಮ್ಮ ಮಹಾರಾಜರಿಗೆ ನಮ್ಮೂರಿಗೆ ಯಾರನ್ನಾದರೂ ಕಳಿಸಿ ಮನೆ ಕಟ್ಟಿಸಿಕೊಡೋಣವೆಂದು ಎನ್ನಿಸಿಲ್ಲವೇ? ಅಡುಗೆ ಮಾಡಲು ಪಾತ್ರೆಗಳನ್ನು ಕೊಡಬೇಕು ಎಂದೆನ್ನಿಸಿಲ್ಲವೇ? ಉಂಗುರ, ಭುಜ ಕಿರೀಟ, ಇನ್ನಾವುದಾದರೂ ವಡವೆಗಳನ್ನು, ಮಲಗಲು ಮಂಚ, ಅದರ ಮೇಲೆ ಹಾಸುಗೆ, ಅದರೆ ಮೇಲೆ ಹೊದಿಯಲು ಹೊದಿಕೆ, ಓಡಾಡಲು ಚಪ್ಪಳಿ, ಇವುಗಳನ್ನು ಕೊಡುತ್ತಾರೋ? "ರಾಮರ ಮಾತು ಕಠಿಣವೆನಿಸಿತು. ಶತಾನಂದರು ಮಾತನಾಡದಾದರು. ಹೇಗೆ ವಿರೋಧಿಸುವುದೆಂದೇ ಗೊತ್ತಾಗದೇ ತುಂಬ ಒದ್ದಾಡಿದರು; ಕೊನೆಗೆ ಮಾತು ಬದಲಿಸಿದರು. "ಹೋಗಲಿ ಬಿಡಿ, ಬೇಸರ ಮಾಡಿಕೊಳ್ಳಬೇಡಿ. ಈಗ ವಿವಾಹ ಕರ್ಮಗಳ ಬಗ್ಗೆ ಒಂದು ನಿಶ್ಚಯಕ್ಕೆ ಬರೋಣ." (ಮುಂದುವರೆಯುವುದು...)