ಮಕ್ಕಳಿದ್ದಾಗ ಇದನ್ನ ಹೇಳಿ ಕೊಡಲು ಶುರು ಮಾಡಬೇಕು. ಹಣ ಗಳಿಸುವುದು ಎಷ್ಟು ಕಷ್ಟ ಆದರೆ ಅದನ್ನ ಖರ್ಚು ಮಾಡುವುದು ಎಷ್ಟು ಸುಲಭ ಎನ್ನುವುದನ್ನ ತಿಳಿಸಿ ಹೇಳಬೇಕು. ಮುಂದುವರೆದ ದೇಶಗಳಲ್ಲಿ ಆಗಲೇ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್ ಎನ್ನುವ ಹೊಸ ಆರ್ಥಿಕ ತಜ್ಞರ ಪಡೆ ಮುಂದಿನ ಪೀಳಿಗೆಗೆ ಇದರ ಬಗ್ಗೆ ಜ್ಞಾನ ನೀಡಲು ಸಜ್ಜಾಗಿದೆ. ಎಲ್ಲಕ್ಕೂ ತಜ್ಞರನ್ನೇ ಅವಲಂಬಿಸಬೇಕಂದಲ್ಲ. ಸರಳವಾಗಿ ನಮ್ಮ ಆದಾಯ ಇಷ್ಟು ವ್ಯಯ ಇಷ್ಟು, ಇಷ್ಟು ಉಳಿಕೆ ಮುಂದಿನ ಜೀವನಕ್ಕೆ ಉಳಿತಾಯ ಮಾಡಲೇಬೇಕು ಎನ್ನುವ ಪಾಠವನ್ನ ಮಕ್ಕಳಿಗೆ ತಿಂಗಳಿಗೊಮ್ಮೆ ಮಾಡಿದರೂ ಸಾಕು. ಅವರಿಗೆ ಮುಂದಿನ ದಿನಗಳಲ್ಲಿ ಯಾವ ಸರ್ಟಿಫೈಡ್ ಸೈಕಾಲಜಿಸ್ಟ್ ಅಂಡ್ ಫೈನಾನ್ಸಿಯಲ್ ಥೆರಪಿಸ್ಟ್ ಅವಶ್ಯಕತೆ ಬರುವುದಿಲ್ಲ. ಎಲ್ಲವನ್ನೂ ಪ್ರೀತಿ -ಭಾವನೆಯಲ್ಲಿ ನೋಡುವ ಭಾರತೀಯ ಪೋಷಕರು ಹೊಸ ದಾರಿಗೆ, ಹೊಸ ಸವಾಲಿಗೆ ಸಜ್ಜಾಗಬೇಕಿದೆ.