ಕೆಲವರಿರುತ್ತಾರೆ ನಿರಾಶಾವಾದಿಗಳು. ತಮ್ಮ ಬಗ್ಗೆ, ತಮ್ಮ ಕುಟುಂಬದ ಬಗ್ಗೆ, ತಮ್ಮ ಉದ್ಯೋಗದ ಬಗ್ಗೆ, ತಮ್ಮ ಧರ್ಮದ ಬಗ್ಗೆ, ತಮ್ಮ ಊರು-ಕೇರಿ ದೇಶದ ಬಗ್ಗೆ, ಅವರಿಗೆ ಕೀಳರಿಮೆ. ಬರೀ ನೆಗೆಟಿವ್ ಆಲೋಚನೆ-ಅಭಿಪ್ರಾಯಗಳೇ.
ಉದಾಹರಣೆಗೆ ನಾನು ಸುಂದರವಾಗಿಲ್ಲ, ನನಗೆ ಬುದ್ಧಿ ಕಡಿಮೆ, ವ್ಯವಹಾರ ಜ್ಞಾನವಿಲ್ಲ. ನಾನು ಓದಿದ್ದು ಕಡಿಮೆ. ಇನ್ನಷ್ಟು ಓದಬಹುದಿತ್ತು. ನನ್ನ ಪ್ರಾರಬ್ಧಕರ್ಮ. ಇಂತಹ ಗಂಡ/ ಹೆಂಡತಿ ದೊರಕಿದ್ದಾನೇ/ಳೆ. ನಾನು ಮಾಡುವ ಉದ್ಯೋಗ ಚೆನ್ನಾಗಿಲ್ಲ. ಸಂಬಳ ಸವಲತ್ತುಗಳು ಕಡಿಮೆ. ತಾಫೆದಾರರಿ ಕೆಲಸ. ಮೇಲಧಿಕಾರಿಯನ್ನು ಮೆಚ್ಚಿಸಲು ಸಾಧ್ಯವಿಲ್ಲ.
ಸಹೋದ್ಯೋಗಿಗಳೆಲ್ಲ ಘಾತುಕರು. ನಂಬಿಕೆಗೆ ಅರ್ಹರಲ್ಲ. ನನ್ನ ಕೈಕೆಳಗೆ ಕೆಲಸ ಮಾಡುವವರು ಖದೀಮರು, ಮೈಗಳ್ಳರು. ನಾನಿರುವ ಸ್ಥಳಚೆನ್ನಾಗಿಲ್ಲ. ಒಂದು ಒಳ್ಳೆಯ ಪಾರ್ಕಿಲ್ಲ. ನೋಡುವಂತಹ ಕಟ್ಟಡವಿಲ್ಲ ನಾನು ಏಕಾದರೂ ಈ ದೇಶದಲ್ಲಿ ಹುಟ್ಟಿದೆನೋ. ಯಾರೂ ಪ್ರಾಮಾಣಿಕರಲ್ಲ.
ಎಲ್ಲರೂ ಮೋಸ ವಂಚನೆ ಮಾಡಲು ಕಾದುಕೊಂಡು ಕುಳಿತಿದ್ದಾರೆ. ಏಮಾರಿಸಿ ಟೋಪಿ ಹಾಕಿ ಬಿಡುತ್ತಾರೆ. ನಮ್ಮ ಧರ್ಮ ಜಡ್ಡುಗಟ್ಟಿದೆ. ಬರಿ ಮೂಢನಂಬಿಕೆಗಳು. ಕಂದಾಚಾರಗಳು. ಆ ಪೂಜೆ ಮಾಡಿಸಿ. ಶಾಂತಿ ಹೋಮ ಮಾಡಿಸಿ ಎಂದು ತಲೆಸವರಿ ಹಣ ಕೀಳಲು ಪೂಜಾರಿಗಳು ರೆಡಿ ಇದ್ದಾರೆ. ನಾವು ಶ್ರದ್ಧೆಯಿಂದ ಹೋಗುತ್ತೇವೆ ಆದರೆ ಅವರಿಗೆ ಶ್ರದ್ಧೆ ಇಲ್ಲ. ಕಾಟಾಚಾರಕ್ಕೆ ಪೂಜೆ ಮಾಡುತ್ತಾರೆ.
ಈ ಪ್ರಸಕ್ತ ಕಾಲದಲ್ಲಿ ಯಾವುದು ಸರಿ ಇಲ್ಲ. ಎಲ್ಲಾ ಹದಗೆಟ್ಟಿದೆ ಯಾವ ಇಲಾಖೆಯಲ್ಲೂ ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಲಂಚವಿಲ್ಲದೆ ನಮ್ಮ ಕೆಲಸ ಮಾಡಿಕೊಡುವುದಿಲ್ಲ. ಯಾವುದೇ ಕಛೇರಿಗೆ ಹೋಗಿ ಕೂತುಕೊಳ್ಳಿ ಎನ್ನುವುದಿಲ್ಲ. ಸೌಜನ್ಯದ ಒಂದು ಮಾತನಾಡುವುದಿಲ್ಲ.
ನಮ್ಮದು ದರಿದ್ರ ದೇಶ. ಒಳ್ಳೆಯ ಸಂಪನ್ಮೂಲವಿದೆ. ಆದರೆ ಭಂಡ ಜನ. ಸೋಮಾರಿ ಜನ ಕಟ್ಟುವುದನ್ನು ಬಿಟ್ಟು ಕೆಡಹಲು ಸಿದ್ಧವಾಗಿರುತ್ತಾರೆ. ಯಾವುದೇ ಊರಿಗೆ ಹೋಗಿ, ಕಂಡಕಂಡ ಕಡೆಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಕಸ ಎಸೆಯುತ್ತಾರೆ. ಸ್ವಚ್ಛತೆಯ ಸೊಲ್ಲೇ ಇಲ್ಲ.
ಯಾವುದೇ ಆಸ್ಪತ್ರೆಗೆ ಹೋಗಿ. ನಿಮ್ಮ ಪರ್ಸ್ ಮೇಲ್ಲೇ ವೈದ್ಯರ ಕಣ್ಣು, ತಪ್ಪು ತಪ್ಪು ರೋಗ ವಿಧಾನ ಮಾಡಿ, ಅನವಶ್ಯಕ ತಪಾಸಣೆ ಮಾಡಿಸಿ, ಹೆಚ್ಚು ಔಷಧಗಳನ್ನು ಬರೆದು ಪ್ರಾಣ ಹಿಂಡುತ್ತಾರೆ… ಇತ್ಯಾದಿ ಇತ್ಯಾದಿ ಈ ಎಲ್ಲಾ ಹೇಳಿಕೆಗಳು ಸ್ವಲ್ಪಮಟಗೆ ನಿಜವಿರಬಹುದು. ಆದರೆ ಅದನ್ನು ಎಲ್ಲರಿಗೆ ಎಲ್ಲ ಸಂದರ್ಭದಲ್ಲಿ ಅನ್ವಯಿಸಲು ಬರುವುದಿಲ್ಲ ಅನ್ವಯಿಸಲೂ ಬಾರದು.
ನಕಾರಾತ್ಮಕ ಆಲೋಚನೆಗಳಿಂದ ಉಂಟಾಗುವ ಸಮಸ್ಯೆಗಳು:
ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಹೇಗೆ?:
ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ
drcrchandrashekhar@gmail.com
Advertisement