

ನಾವು ಭಾರತೀಯರು ಬಹಳ ಭಾವುಕ ಜೀವಿಗಳು , ಭಾರತೀಯ ಮೂಲದ ರಿಷಿ ಸುನುಕ್ ಬ್ರಿಟನ್ ದೇಶದ ಪ್ರಧಾನಿ ಹುದ್ದೆಗೇರುತ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದೇವೆ . ಸಮಾಜದ ಇನ್ನೊಂದು ವರ್ಗ ಹಿಂದೂವೊಬ್ಬ ಆ ದೇಶದ ಪ್ರಧಾನಿಯಾಗುತ್ತಿದ್ದಾನೆ ಎಂದು ಬೀಗುತ್ತಿದೆ. ಇನ್ನು ಕನ್ನಡಿಗರಂತೂ ಕರ್ನಾಟಕದ ಅಳಿಯ ಎಂದು ಭಾವನೆಯನ್ನ ಇನ್ನೊಂದು ಮಟ್ಟಕ್ಕೆ ಒಯ್ದಿದ್ದಾರೆ . ಭಾವನೆ ತಪ್ಪಲ್ಲ . ಆತ ನಮ್ಮವೆನೆಂದು ಬೀಗುವುದು ಕೂಡ ತಪ್ಪಲ್ಲ , ಆದರೆ ಅಂದು ಅವರು ನಮ್ಮನ್ನ ಆಳಿದ್ದರು ಇಂದು ನಮ್ಮ ವೇಳೆ ಎನ್ನುವಂತೆ , ಇನ್ನೇನು ವಿಶ್ವವೇ ಭಾರತದ ಅಡಿಯಾಳಾಗುತ್ತದೆ ಎನ್ನುವಂತೆ ಕೂಗಾಡುವುದು ತಪ್ಪು . ಅತಿ ಭಾವುಕತೆ ಖಂಡಿತ ಒಳ್ಳೆಯದಲ್ಲ , ಇರಲಿ
ಮೇಲಿನ ಮಾತುಗಳನ್ನ ಬರೆಯಲು ಕಾರಣವಿದೆ , ನಾವು ಹೀಗೆ ಭಾವುಕತೆಯಿಂದ ಬೀಗುವುದರಲ್ಲಿ ಮಗ್ನರಾಗಿದ್ದೇವೆ , ಆದರೆ 28, ಅಕ್ಟೋಬರ್ 2022 ರಂದು ಪ್ರಧಾನಿ ಪಟ್ಟಕ್ಕೆ ಏರಲಿರುವ ರಿಷಿ ಸುನುಕ್ ಅವರಿಗೆ ಖುಷಿಪಡಲು , ಸಿಕ್ಕ ಪಟ್ಟಕ್ಕೆ ಸಂಭ್ರಮಿಸಲು ಕೂಡ ಪೂರೋಸೋತ್ತಿಲ್ಲ , ಏಕೆಂದರೆ ನೆನಪಿಡಿ ಒಬ್ಬ ಮಹಿಳಾ ಪ್ರಧಾನಿ ಕೇವಲ 45 ದಿನದಲ್ಲಿ ಇನ್ನು ನನ್ನಿಂದ ಸಾಧ್ಯವಿಲ್ಲ ಎಂದು ಕೈ ಚಲ್ಲಿ ಸರಕಾರವನ್ನ , ಹುದ್ದೆಯನ್ನ ಅರ್ಧದಲ್ಲಿ ಬಿಟ್ಟು ಹೊರನೆಡೆಯುತ್ತಾರೆ ಎಂದರೆ ಪರಿಸ್ಥಿತಿಯಂತೂ ಸುಲಭವಿರಲು ಸಾಧ್ಯವಿಲ್ಲ ಅಂತಾಯ್ತು. ಹೌದು ರಿಷಿಯವರ ಮುಂದೆ ಅನೇಕ ಸಾವಾಲುಗಳಿವೆ , ಅವುಗಳ ಪಟ್ಟಿ ದೊಡ್ಡದು. ಹೀಗಾಗಿ ಸದ್ಯದ , ತಕ್ಷಣದ ಸವಾಲುಗಳನ್ನ ನೋಡೋಣ.
ಕೊನೆಮಾತು: ನಮ್ಮಲ್ಲಿ ನಡೆಯುವ ಕಾಲೇ ಎಡವುವುದು ಎನ್ನುವ ಮಾತಿದೆ. ಹಾಗೊಮ್ಮೆ ರಿಷಿ ಸುನುಕ್ ಮೇಲಿನ ಎಲ್ಲಾ ಸವಾಲುಗಳನ್ನ ತಕ್ಕ ಮಟ್ಟಿಗೆ ಮೆಟ್ಟಿ ನಿಂತರೂ ಜನ ಮಾತನಾಡುವುದು ಬಿಡುವುದಿಲ್ಲ. ಇಂಗ್ಲೆಂಡ್ ಇಂದು ಒಡೆದ ಮನೆ. ಅಲ್ಲಿ ಎಲ್ಲರನ್ನ, ಎಲ್ಲವನ್ನ ಒಮ್ಮತಕ್ಕೆ, ಸಹಮತಕ್ಕೆ ತರುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಯಾವ ನಿರ್ಧಾರ ತೆಗೆದುಕೊಂಡರೂ ಅದು ತಪ್ಪಾಗುವ ಪರಿಸ್ಥಿತಿ ಇರುವಾಗ ಯಾರನ್ನೂ ದೂಷಿಸಿ ಪ್ರಯೋಜನವೇನು? ಸಮಯಕ್ಕೆ ಎಲ್ಲವನ್ನ ಮರೆಸುವ ಶಕ್ತಿಯಿದೆ ಎನ್ನುತ್ತಾರೆ. ಇಂಗ್ಲೆಂಡ್ ಪಾಲಿಗೆ ಸಮಯ ಬೇಕು, ಸಾಕಷ್ಟು ಸಮಯ ಬೇಕು, ಮರೆಯಲು ಮತ್ತೆ ಮೆರೆಯಲು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com