
ಕಳೆದ ವಾರ ನಮ್ಮ ಪ್ರಧಾನಿಯವರು ಅಮೆರಿಕ ಪ್ರವಾಸವನ್ನ ಕೈಗೊಂಡಿದ್ದರು. ಅಲ್ಲಿಗೆ ಅವರು ಮೋಜಿಗೆ ಹೋಗಿರಲಿಲ್ಲ. ಅಲ್ಲಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿಂದ ಎಲಾನ್ ಮಸ್ಕ್, ಸುಂದರ್ ಪಿಚೈ, ಸತ್ಯ ನಡೆಲ್ಲಾರಂತಹ ಅತಿರಥ ಮಹಾರಥರನ್ನ ಭೇಟಿ ಮಾಡಿದ್ದಾರೆ. ಪ್ರಧಾನಿಯವರ ಯಾವುದೇ ವಿದೇಶ ಪ್ರವಾಸಗಳಿರಲಿ ಅವೆಲ್ಲವೂ ಭಾರತದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತಹ ಒಂದಷ್ಟು ಒಪ್ಪಂದಗಳನ್ನ ಮಾಡಿಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡೆ ಮಾಡಿರುತ್ತಾರೆ. ತಮ್ಮ ಜೊತೆಗೆ ತಮ್ಮನ್ನು ಹೊಗಳಲು ಬೇಕಾಗುವ ಪತ್ರಕರ್ತರನ್ನು ಎಂದಿಗೂ ಕರೆದುಕೊಂಡು ಹೋಗುವುದಿಲ್ಲ. ಅವರ ಜೊತೆಗೆ ಹೋದವರು ಕೂಡ ಅತಿರಥ ಮಹಾರಥರೇ! ಮುಕೇಶ್ ಅಂಬಾನಿ, ಆನಂದ್ ಮಹಿಂದ್ರಾ, ನಿತಿನ್ ಕಾಮತ್ ಇತರರು ಪ್ರಧಾನಿಯವರ ಜೊತೆಗಿದ್ದರು.
ಅಮೆರಿಕಾದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಯವರೊಂದಿಗಿನ ವ್ಯವಹಾರ ಸುಲಭವಲ್ಲ ಎನ್ನುವ ಮಾತನ್ನು ಆಡಿದ್ದರು. ಅರ್ಥ ಇಷ್ಟೇ, ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟು ದೊಡ್ಡ ಮಟ್ಟದ ಲಾಭವನ್ನು ತರಲು ಪ್ರಯತ್ನಿಸುತ್ತಾರೆ ಹೊರತು, ಸಣ್ಣಪುಟ್ಟದ್ದಕ್ಕೆಲ್ಲ ಹೊಂದಾವಣಿಕೆ ಮಾಡಿಕೊಂಡು ಬರುವವರಲ್ಲ. ಈಗಿನ ಅಧ್ಯಕ್ಷ ಜೋ ಬೈಡೆನ್ ಅವರು ಕೂಡ ಹೆಚ್ಚು ಕಡಿಮೆ ಅದೇ ಮಾತನ್ನು ಆಡಿದ್ದಾರೆ, ಜೊತೆಗೆ ರಷ್ಯಾ ಮತ್ತು ಚೀನಾ ದೇಶದೊಂದಿಗೆ ಭಾರತದ ಜೊತೆಗೆ ಹೊಂದಿರುವ ಸಂಬಂಧ ಹೊಂದಲು ಸಾಧ್ಯವಿಲ್ಲ, ಏಕೆಂದರೆ ಭಾರತದ ಮತ್ತು ಅಮೆರಿಕ ದೇಶದ ಡಿಎನ್ಎ ಒಂದೇ , ನಮ್ಮದು ಪ್ರಜಾಪ್ರಭುತ್ವವನ್ನ ಹೊಂದಿರುವ ದೇಶ ಎಂದಿದ್ದಾರೆ. ಅಮೆರಿಕ ದೇಶಕ್ಕೆ ಹಿಂದಿಗಿಂತಲೂ ಇಂದು ಭಾರತದ ಸಖ್ಯ ಹೆಚ್ಚಾಗಿದೆ. ಚೀನಾ ದೇಶವನ್ನ ಪೂರ್ಣವಾಗಿ ಅವಲಂಬಿಸಿದರ ಫಲವನ್ನ ಅಮೆರಿಕ ಇಂದು ಅನುಭವಿಸುತ್ತಿದೆ. ಹೀಗಾಗಿ ತುರ್ತಾಗಿ ಅದಕ್ಕೆ ಭಾರತದ ಜೊತೆಗೆ ಒಪ್ಪಂದಗಳು ಬೇಕಾಗಿವೆ. ಇದು ಭಾರತಕ್ಕೂ ಬೇಕಾಗಿರುವ ಟಾನಿಕ್. ಹೀಗಾಗಿ ಈ ಭೇಟಿಯ, ಒಪ್ಪಂದಗಳ ಫಲಿತಾಂಶ ಎರಡೂ ದೇಶಗಳಿಗೂ ಒಳಿತನ್ನ ಮಾಡಲಿವೆ.
ಮೋದಿಯವರ ಇಂಗ್ಲಿಷ್ ಉಚ್ಚಾರಣೆಯನ್ನ ಟ್ರೋಲ್ ಮಾಡುವವರಿಗೆ ಅದಕ್ಕಿಂತ ಮುಖ್ಯವಾಗಿ ಒಪ್ಪಂದಗಳ ಸಾರಾಂಶ, ಅದರ ಫಲಿತಾಂಶದ ಬಗ್ಗೆ ಗಮನವಿಲ್ಲ. ಇಂದಿನ ಬರಹದಲ್ಲಿ ನಾವು ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಕೊನೆಮಾತು: ಜಗತ್ತಿನ ಜನರ ಮನಸ್ಥಿತಿ ಎಲ್ಲಿಂದೆಲ್ಲಿಗೆ ಹೋಗಿ ಸೇಮ್, ಕೆಲವರು ಹೊಗಳುತ್ತಾರೆ, ಕೆಲವರು ಎಲ್ಲದರಲ್ಲೂ ನೆಗಟಿವ್ ಹುಡುಕುತ್ತಾರೆ. ಜಗತ್ತಿನ ಬಹುತೇಕರು ಭಾರತದ ಪ್ರಧಾನಿಯವರ ಕಾರ್ಯವನ್ನ ಹೊಗಳುತ್ತಿದ್ದರೆ, ಕೆಲವು ನಾಯಕರು ಮೋದಿಯವರ ಕಾರ್ಯದಲ್ಲಿ ಹುಳುಕನ್ನ ಹುಡುಕಲು ಪ್ರಯತ್ನ ಮಾಡಿದ್ದಾರೆ. ಮೊದಲೇ ಹೇಳಿದಂತೆ ಇದು ಜಗದ ನಿಯಮ. ಎಲ್ಲರೂ ಒಂದೇ ದಿಕ್ಕಿನಲ್ಲಿ, ಒಂದೇ ನಿಟ್ಟಿನಲ್ಲಿ ಯೋಚಿಸಲಿ ಎನ್ನುವುದು ಸಾಧ್ಯವಿಲ್ಲದ ಮಾತು. ಯಾವುದು ಬಹುಜನರ, ದೇಶದ ಹಿತದಲ್ಲಿರುತ್ತದೆ ಅದನ್ನ ಮಾಡಬೇಕು. ಉಳಿದಂತೆ ಎಲ್ಲಾ ನಾಗರೀಕರು ತಮ್ಮ ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳಲು ಸ್ವತಂತ್ರರು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement