ಟ್ವೀಟರ್‌ನಲ್ಲಿ ಅಂಪೈರ್ ಧರ್ಮಸೇನ ತಪ್ಪು ತೀರ್ಪನ್ನು ಅಣುಕಿಸಿದ ಸೆಹ್ವಾಗ್

ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಟ್ವೀಟ್ ಗಳ ಮೂಲಕ ಜನಪ್ರಿಯರಾಗಿದ್ದು ಇದೀಗ ಅವರು...
ಕುಮಾರ ಧರ್ಮಸೇನ-ವೀರೇಂದ್ರ ಸೆಹ್ವಾಗ್
ಕುಮಾರ ಧರ್ಮಸೇನ-ವೀರೇಂದ್ರ ಸೆಹ್ವಾಗ್

ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಟ್ವೀಟ್ ಗಳ ಮೂಲಕ ಜನಪ್ರಿಯರಾಗಿದ್ದು ಇದೀಗ ಅವರು ಶ್ರೀಲಂಕಾದ ಅಂಪೈರ್ ಕುಮಾರ ಧರ್ಮಸೇನ ಅವರ ಕಾಲೆಳೆದಿದ್ದಾರೆ.

ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ರನ್ನು ಔಟ್ ಎಂದು ಧರ್ಮಸೇನ ತೀರ್ಪು ನೀಡಿದ್ದರು. ಆದರೆ ಡಿಆರ್ಎಸ್ ನಲ್ಲಿ(ಡಿಸಿಷನ್ ರಿವ್ಯೂ ಸಿಸ್ಟಂ) ಆ ತೀರ್ಪು ತಪ್ಪೆಂದು ಸಾಬೀತಾಗಿತ್ತು. ಇದನ್ನು ಸೆಹ್ವಾಗ್ ಧರ್ಮಸೇನ ರಿವ್ಯೂ ಸಿಸ್ಟಂ ಎಂದು ಅಣಕವಾಡಿದ್ದಾರೆ.

ಈ ಹಿಂದೆ ಭಾರತ-ಬಾಂಗ್ಲಾದೇಶ ನಡುವೆ ಟೆಸ್ಟ್ ಪಂದ್ಯ ನಡೆದಿದ್ದಾಗ ಧರ್ಮಸೇನಾ ತಪ್ಪು ತೀರ್ಪು ನೀಡಿದ್ದರು. ಆದಲೇ ವೀರೂ ಧರ್ಮಸೇನ ರಿವ್ಯೂ ಸಿಸ್ಟಂ ಎಂಬ ಪದ ಬಳಕೆಯನ್ನು ಮೊದಲ ಬಾರಿಗೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com