ಮೈದಾನದಲ್ಲಿ ಶ್ರೀಶಾಂತ್ ಮಾಡಿದ್ದು ದೊಡ್ಡ ನಾಟಕ: ಕಪಾಳ ಮೋಕ್ಷ ಪ್ರಕರಣ ಕುರಿತು ಹರ್ಭಜನ್ ಮಾತು

ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಆಟಗಾರ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಪ್ರಕರಣ ಸಂಬಂಧ ಕ್ಷಮೆ ..
ಶ್ರೀಶಾಂತ್ ಮತ್ತು ಹರ್ ಭಜನ್ ಸಿಂಗ್
ಶ್ರೀಶಾಂತ್ ಮತ್ತು ಹರ್ ಭಜನ್ ಸಿಂಗ್

ನವದೆಹಲಿ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಆಟಗಾರ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡಿದ್ದ ಪ್ರಕರಣ ಸಂಬಂಧ ಕ್ಷಮೆ ಕೇಳಿದ್ದಾರೆ.

ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹರ್ ಭಜನ್ ಮುಂಬಯಿ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡು ನಡುವೆ ನಡೆದ ಪಂದ್ಯದ ವೇಳೆ ಶ್ರೀಶಾಂತ್ ಕೆನ್ನೆಗೆ ಹೊಡೆದಿದ್ದೆ. ನಾನು ಹಾಗೆ ಮಾಡಬಾರದಿತ್ತು.

ಆ ವೇಳೆ ನಾನು ತಪ್ಪು ಮಾಡಿದೆ. ಈ ಹಿಂದೆ ಹಲವು ಬಾರಿ ನಾನು ತಪ್ಪು ಮಾಡಿದ್ದೇನೆ. ಆ ಘಟನೆಗಳ ನಂತರ ನಾನು ತುಂಬಾ ಕಲಿತಿದ್ದೇನೆ. ಆದರೆ ಶ್ರೀಶಾಂತ್ ಕೆನ್ನೆಗೆ ಹೊಡೆದ ಘಟನೆ ನನಗೆ ಮರೆಯಲಾಗುತ್ತಿಲ್ಲ. ಈ ಪ್ರಕರಣದ ನಂತರ ಶ್ರೀಶಾಂತ್ ಅತ್ತರು, ಅಲ್ಲಿ ನಾಟಕ ಮಾಡಿದರು, ನಾನು ತೀವ್ರ ಮುಜುಗರಕ್ಕೊಳಗಾದೆ.  ಆಗ ಎಲ್ಲರೂ ನನ್ನ ಬೈಯ್ದರು.ಎಲ್ಲವೂ ನನ್ನದೇ ತಪ್ಪು ಎಂಬಂತೆ ಬಿಂಬಿಸಿದರು, ನಾನು ಹಾಗೆ ಮಾಡಬಾರದಿತ್ತು. ಆ ನಂತರ ಕ್ಷಮೆ ಕೇಳಿದೆ ಎಂದು ಆ ಪ್ರಕರಣವನ್ನು ಹರ್ ಭಜನ್ ಸಿಂಗ್ ಮೆಲುಕು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com