ಮುಂಬೈ: ಮುಂಬೈ: ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡಿದ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿಯನ್ನು ಮಾಜಿ ಆಟಗಾರ ವಿನೋದ್ ಕಾಂಬ್ಳಿ ಟೀಕಿಸಿದ್ದಾರೆ.
ಉಭಯ ದೇಶಗಳ ಪ್ರವಾಸಕ್ಕೆ ಆಯ್ಕೆ ಸಮಿತಿ ಈ ಭಾರಿ ರಣಜಿ ಗೆದ್ದ ಮುಂಬೈ ತಂಡದ ಯಾವೊಬ್ಬ ಆಟಗಾರನಿಗೂ ತಂಡದಲ್ಲಿ ಸ್ಥಾನ ನೀಡದಿರುವುದೇ ವಿನೋದ್ ಕಾಂಬ್ಳಿ ಕೋಪಕ್ಕೆ ಕಾರಣವಾಗಿದೆ.
ಮುಂಬೈ ತಂಡದ ಶ್ರೇಯಸ್ ಅಯ್ಯರ್, ಆದಿತ್ಯ ತರೆ ಮತ್ತು ಸಿದ್ದೇಶ್ ಲಾಡ್ ರಂತ ಆಟಗಾರರು ಉತ್ತಮವಾಗಿ ಆಡುತ್ತಿದ್ದು ಅವರಿಗೂ ಒಂದು ಅವಕಾಶ ನೀಡಬೇಕಿತ್ತು. ಇಂಥ ಯುವ ಆಟಗಾರರನ್ನೇ ಪ್ರವಾಸಕ್ಕೆ ಆಯ್ಕೆ ಮಾಡದೇ ಇರುವುದು ತಪ್ಪು. ಇಂಥ ತಪ್ಪುಗಳಿಗಾಗಿಯೇ ಈ ಹಿಂದೆ ಆಯ್ಕೆಗಾರರನ್ನು ಮೊಹಿಂದರ್ ಅಮರ್ ನಾಥ್ ಅವರು ಜೋಕರ್ಸ್ ಗಳು ಎಂದು ಕರೆದಿದ್ದರು ಎಂದು ಟ್ವೀಟಿಸಿದ್ದಾರೆ.
Advertisement