ಸಮಾರಂಭದಲ್ಲಿ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಕ್ರಮವಾಗಿ ಮೈದಾನಕ್ಕೆ ಆಗಮಿಸಿದರು. ಈ ಆಟಗಾರರನ್ನು ಕಂಡ ಪ್ರೇಕ್ಷಕರು ಜೈ ಎಂಬ ಉದ್ಘೋಷ ಕೂಗಿದರು. ನಂತರ ನಾಲ್ವರು ಆಟಗಾರರಿಗೆ ಚಿನ್ನದ ಬ್ಯಾಟ್ ಗಳನ್ನು ನೀಡಿ ಸನ್ಮಾನಿಸಲಾಯಿತು.