ಮದುವೆ ಮರು ದಿನವೇ ಮೈದಾನಕ್ಕಿಳಿದು 6 ವಿಕೆಟ್ ಕಬಳಿಸಿದ ಧನಂಜಯ

ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಗೆಲುವುದು ಸಾಧಿಸಬಹುದು. ಆದರೆ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದಾಗಿದ್ದ ಟೀಂ ಇಂಡಿಯಾಗೆ...
ಅಖಿಲ ಧನಂಜಯ
ಅಖಿಲ ಧನಂಜಯ
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಗೆಲುವುದು ಸಾಧಿಸಬಹುದು. ಆದರೆ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದಾಗಿದ್ದ ಟೀಂ ಇಂಡಿಯಾಗೆ ಮಾರಕವಾಗಿದ್ದು ಲಂಕಾದ ಸ್ಪಿನ್ ಬೌಲರ್ ಧನಂಜಯ್. 
ಗುರುವಾರ ಪಲ್ಲೆಕೆಲೆಯಲ್ಲಿ ಎರಡನೇ ಏಕದಿನ ಪಂದ್ಯ ನಡೆದಿದ್ದು ಭಾರತ ಮೂರು ವಿಕೆಟ್ ಗಳ ಪ್ರಯಾಸ ಜಯ ಗಳಿಸಿತ್ತು. ಭಾರತ ತಂಡಕ್ಕೆ ಕಂಟಕವಾಗಿ ಕಾಡಿದ್ದು ಧನಂಜಯ. ಟೀಂ ಇಂಡಿಯಾದ ಆರಂಭಿಕ ಭದ್ರಕೋಟೆಯನ್ನು ಕೆಡವಿದ ಧನಂಜಯ್ ನಂತರ 6 ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಅಡ್ಡ ಗೋಡೆಯಾಗಿ ನಿಂತರು. ಆದರೆ ಅತೀ ಪ್ರಯಾಸದಿಂದ ಟೀಂ ಇಂಡಿಯಾ ಜಯ ಗಳಿಸಿತ್ತು. 
ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಧನಂಜಯ ಅವರು ಮದುವೆಯಾದ ಮರು ದಿನವೇ ತಂಡವನ್ನು ಸೇರಿಕೊಂಡಿದ್ದರು. ಬುಧವಾರ ಮದುವೆಯಾಗಿದ್ದ ಧನಂಜಯ್ ಮಾರನೇ ದಿನವೇ ಪಂದ್ಯವನ್ನು ಆಡಿದ್ದು 6 ವಿಕೆಟ್ ಗಳನ್ನು ಕಬಳಿಸಿದ್ದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ಇನ್ನು ತಮ್ಮ ಬೌಲಿಂಗ್ ಪ್ರದರ್ಶನ ಬಗ್ಗೆ ಅಖಿಲ ಧನಂಜಯ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com