ಗುರುವಾರ ಪಲ್ಲೆಕೆಲೆಯಲ್ಲಿ ಎರಡನೇ ಏಕದಿನ ಪಂದ್ಯ ನಡೆದಿದ್ದು ಭಾರತ ಮೂರು ವಿಕೆಟ್ ಗಳ ಪ್ರಯಾಸ ಜಯ ಗಳಿಸಿತ್ತು. ಭಾರತ ತಂಡಕ್ಕೆ ಕಂಟಕವಾಗಿ ಕಾಡಿದ್ದು ಧನಂಜಯ. ಟೀಂ ಇಂಡಿಯಾದ ಆರಂಭಿಕ ಭದ್ರಕೋಟೆಯನ್ನು ಕೆಡವಿದ ಧನಂಜಯ್ ನಂತರ 6 ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಅಡ್ಡ ಗೋಡೆಯಾಗಿ ನಿಂತರು. ಆದರೆ ಅತೀ ಪ್ರಯಾಸದಿಂದ ಟೀಂ ಇಂಡಿಯಾ ಜಯ ಗಳಿಸಿತ್ತು.