ಗುರುವಾರ ರಾಯುಡು ಅವರು ಹೈದರಾಬಾದ್ ನಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ ಹಿರಿಯ ನಾಗರಿಕರೊಬ್ಬರು ಇದನ್ನು ಪ್ರಶ್ನಿಸಿದರು. ಇದರಿಂದ ಕಾರಿನಿಂದ ಹೊರಬಂದ ಅಂಬಾಟಿ ರಾಯುಡು ಹಿರಿಯರ ಜತೆ ವಾಗ್ವಾದಕ್ಕೆ ಇಳಿದರು. ನಂತರ ಅವರ ಮೇಲೆ ಕೈ ಮಾಡಿದರು. ಕೂಡಲೇ ಸ್ಥಳದಲ್ಲಿದ್ದ ಜನರು ರಾಯುಡುವನ್ನು ತಡೆದು ಅಲ್ಲಿಂದ ತೆರಳುವಂತೆ ಸೂಚಿಸಿದರು.