ನಾಲ್ಕನೇ ದಿನದ ಅಂತ್ಯಕ್ಕೆ 111 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಕಡೆಯ ದಿನದಾಟದಲ್ಲಿ ಗೆಲ್ಲಲು ಅಗತ್ಯವಾಗಿದ್ದ 87 ರನ್ ಗಳಿಸುವಲ್ಲಿ ವಿಫಲವಾಯಿತು. ಈ ನಡುವೆ ಅಭಿಮನ್ಯು ಮಿಥುನ್ (33) ಮತ್ತು ಶ್ರೇಯಸ್ ಗೋಪಾಲ್ (23*) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ ವಿದರ್ಭ ಪರ ರಜನೀಶ್ ಗುರ್ಬಾನಿ ಮಾರಕ ಬೌಲಿಂಗ್ ದಾಳಿಗೆ ಕರ್ನಾಟಕದ ಆಟಗಾರರು ಬೆದರುಗೊಂಬೆಗಳಾದರು.