ಹೆಸರಿನ ಗೊಂದಲದಿಂದಾಗಿ ಐಪಿಎಲ್ ಹರಾಜಿನಲ್ಲಿ ಖರೀದಿಯಾಗದ ಯುವ ಕ್ರಿಕೆಟಿಗ

ಯುವ ಕ್ರಿಕೆಟಿಗನೊಬ್ಬ ಅಂಧೇರಿಯ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿ ಸುದ್ದಿಯಾಗಿದ್ದ ಈ ಪ್ರಕರಣ ಸಂಬಂಧ ಯುವ ಕ್ರಿಕೆಟಿಗನನ್ನು ಬಂಧಿಸಲಾಗಿತ್ತು...
ಹರ್​ಪ್ರೀತ್ ಸಿಂಗ್
ಹರ್​ಪ್ರೀತ್ ಸಿಂಗ್

ಮುಂಬೈ: ಯುವ ಕ್ರಿಕೆಟಿಗನೊಬ್ಬ ಅಂಧೇರಿಯ ರೈಲು ನಿಲ್ದಾಣದೊಳಗೆ ಕಾರು ನುಗ್ಗಿಸಿ ಸುದ್ದಿಯಾಗಿದ್ದ ಈ ಪ್ರಕರಣ ಸಂಬಂಧ ಯುವ ಕ್ರಿಕೆಟಿಗನನ್ನು ಬಂಧಿಸಲಾಗಿತ್ತು. ಹೆಸರಿನ ಗೊಂದಲದಿಂದಾಗಿ ಮತ್ತೊಬ್ಬ ಯುವ ಕ್ರಿಕೆಟಿಗನ ಭವಿಷ್ಯಕ್ಕೆ ಹೊಡೆತ ಬಿದ್ದಿದೆ.

ಸೋಮವಾರ ಬೆಳಗ್ಗೆ ಮುಂಬೈನ ಅಂಧೇರಿ ರೈಲು ನಿಲ್ದಾಣಕ್ಕೆ ಹರ್ಮಿತ್ ಸಿಂಗ್ ಯುವ ಕ್ರಿಕೆಟಿಗ ಕಾರು ನುಗ್ಗಿಸಿದ್ದ. ಈತ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ. ಆದರೆ ಮಾಧ್ಯಮಗಳಲ್ಲಿ ಬಂಧಿತನ ಹೆಸರನ್ನು ಹರ್​ಪ್ರೀತ್ ಸಿಂಗ್ ಎಂದು ಬಳಸಲಾಗಿದ್ದು ಮಧ್ಯಪ್ರದೇಶದ ಹರ್​ಪ್ರೀತ್ ಸಿಂಗ್ ಕ್ರೀಡಾ ಭವಿಷ್ಯಕ್ಕೆ ಹೊಡೆತ ಬಿದ್ದಿದೆ.

ಐಪಿಎಲ್ 10ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸೋಮವಾರ ನಡೆದಿತ್ತು. ಈ ಹರಾಜಿನಲ್ಲಿ ಹರ್​ಪ್ರೀತ್ ಸಿಂಗ್ ಸಹ ಹರಾಜಗಬೇಕಿತ್ತು. ಆದರೆ ಹೆಸರಿನ ಗೊಂದಲದಿಂದಾಗಿ ಐಪಿಎಲ್ ಫ್ರಾಂಚೈಸಿಗಳು ಸಹ ಹರ್​ಪ್ರೀತ್ ಸಿಂಗ್ ರನ್ನು ಖರೀದಿಸಿಲ್ಲ. ಐಪಿಎಲ್ ನಲ್ಲಿ ಆಡುವ ಕನಸು ಕಂಡಿದ್ದ ಹರ್​ಪ್ರೀತ್ ಗೆ ಇದೀಗ ನಿರಾಸೆ ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com