ಕ್ರಿಕೆಟ್ನೆಕ್ಸ್ಟ್ ಜತೆ ಮಾತನಾಡಿದ ಪ್ರಸಾದ್, 9 ವರ್ಷಗಳ ಕಾಲ ನಾಯಕ ಸ್ಥಾನ ನಿರ್ವಹಿಸಿ, ಅದನ್ನು ತ್ಯಜಿಸುವ ನಿರ್ಧಾರ ಧೋನಿಯ ವೈಯಕ್ತಿಕ ನಿರ್ಧಾರವಾಗಿತ್ತು ಎಂದಿದ್ದಾರೆ. ಅಲ್ಲದೆ ನಾಗ್ಪುರದಲ್ಲಿ ಜಾರ್ಖಂಡ್ ಮತ್ತು ಗುಜರಾತ್ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ದೋನಿ ಈ ನಿರ್ಧಾರವನ್ನು ನನಗೆ ಹೇಳಿದ್ದರು ಎಂದು ಪ್ರಸಾದ್. ತಿಳಿಸಿದ್ದಾರೆ.