ಈಗಿರುವ ತಂಡದಲ್ಲಿ ಯುವರಾಜ್ ಸಿಂಗ್ ಅವರನ್ನು ಹೊರತುಪಡಿಸಿ ಎಲ್ಲರೂ ಎಂಎಸ್ ಧೋನಿ ನಾಯಕತ್ವದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದಾರೆ. ಎಂಎಸ್ ಧೋನಿ ಆ ರೀತಿಯ ಪರಿವರ್ತನೆಯನ್ನು ಎಂಎಸ್ ಧೋನಿ ಕಂಡಿದ್ದಾರೆ. ನಾಯಕತ್ವ ಬಿಟ್ಟುಕೊಡುವ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಂಎಸ್ ಧೋನಿ ನಿರ್ಧಾರ ಅವರ ನಿಸ್ವಾರ್ಥತೆಯನ್ನು ತೋರುತ್ತದೆ. ಅಂದು ಧೋನಿಗೆ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ಸಮಯ ಎಂಬ ನನ್ನ ಅಭಿಪ್ರಾಯದಂತೆ ಈಗ ಧೋನಿಗೆ ಬಹುಶಃ ನಾಯಕತ್ವ ವಹಿಸಿಕೊಳ್ಳಲು ವಿರಾಟ್ ಕೋಹ್ಲಿಗೆ ಇದು ಸೂಕ್ತ ಸಮಯ ಎಂದೆನಿಸಿರಬೇಕು. ಆದ್ದರಿಂದ ಸೂಕ್ತ ಸಮಯದಲ್ಲಿ ಧೋನಿ ನಿರ್ಧಾರ ತೆಗೆದುಕೊಂಡಿದ್ದಾರೆ. ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೋಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ಇದೇ ರೀತಿ ಏಕದಿನ ಫಾರ್ಮೆಟ್ ನಲ್ಲೂ ಕೋಹ್ಲಿ ಮುಂದುವರೆಯಲಿದ್ದಾರೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದು, ಧೋನಿ ತಂಡದಲ್ಲಿ ಎಂದಿಗೂ ನಾಯಕನಾಗಿಯೇ ಇರಲಿದ್ದಾರೆ, ಅವರು ಭಾರತ ತಂಡಕ್ಕೆ ಸಿಕ್ಕ ಓರ್ವ ಅದ್ಭುತ ನಾಯಕ ಎಂದಿದ್ದಾರೆ.