ನವದೆಹಲಿ: ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಎ ತಂಡದ ನಾಯಕನಾಗಿ ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ.
ಆಫ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಏಕದಿನ ಪಂದ್ಯಕ್ಕೆ ಮನೀಷ್ ಪಾಂಡೆ ಅವರು ನೇತೃತ್ವ ವಹಿಸಿದರೆ, ಟೆಸ್ಟ್ ಗೆ ಕರುಣ್ ನಾಯರ್ ನಾಯಕತ್ವ ವಹಿಸಲಿದ್ದಾರೆ. ಇನ್ನು ಮನೀಷ್ ಪಾಂಡೆ ಗಾಯಗೊಂಡಿರುವುದರಿಂದ ಅವರು ಸಂಪೂರ್ಣ ಗುಣಮುಖರಾಗಿದ್ದರೆ ಮಾತ್ರ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಎ, ಆಫ್ರಿಕಾ ಎ ಮತ್ತು ಭಾರತ ಎ ತಂಡ ಸೆಣೆಸಲಿದೆ. ಜುಲೈ 26ರಂದು ಆಸ್ಟ್ರೇಲಿಯಾ ಎ ತಂಡದೊಂದಿಗೆ ಭಾರತ ಎ ತಂಡ ಸೆಣೆಸುವುದರೊಂದಿಗೆ ತ್ರಿಕೋನ ಸರಣಿ ಪ್ರಾರಂಭಗೊಳ್ಳಲಿದೆ.
ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಕರುಣ್ ನಾಯರ್ ಮತ್ತು ಜಯಂತ್ ಯಾದವ್ ಇಬ್ಬರು ಸ್ಥಾನ ಪಡೆದಿದ್ದು ಒಂದು ಪಕ್ಷ ಮನೀಷ್ ಪಾಂಡೆ ಗುಣಮುಖರಾಗದಿದ್ದರೆ ಕರುಣ್ ನಾಯರ್ ಅವರೇ ಎರಡು ಮಾದರಿಗೂ ನಾಯಕತ್ವ ವಹಿಸಲಿದ್ದಾರೆ.