ಚಿನ್ನಸ್ವಾಮಿ ಕ್ರೀಡಾಂಗಣದ ಸಬ್‌ಏರ್ ವ್ಯವಸ್ಥೆಗೆ ತಲೆದೂಗಿದ ಗಂಭೀರ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ...
ಚಿನ್ನಸ್ವಾಮಿ ಕ್ರೀಡಾಂಗಣ
ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸೌಕರ್ಯವುಳ್ಳ ಸಬ್‌ಏರ್ ಸಿಸ್ಟಮ್ ಅನ್ನು ಶ್ಲಾಘಿಸಿದ್ದಾರೆ. 
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯ ಮಳೆಯಿಂದಾಗಿ ರದ್ದಾಗುವ ಸಾಧ್ಯತೆ ಇತ್ತು. ಎಡಬಿಡದೇ ಸುರಿದ ಮಳೆ ತಣ್ಣಗಾದಾಗ ಕೆಲವೇ ನಿಮಿಷಗಳಲ್ಲಿ ಕ್ರೀಡಾಂಗಣದಲ್ಲಿದ್ದ ನೀರನ್ನು ಸಬ್‌ಏರ್ ವ್ಯವಸ್ಥೆಯಿಂದಾಗಿ ಕ್ಲೀನ್ ಮಾಡಲಾಯಿತು. ಮಳೆಯಿಂದಾಗಿ ನಾವು ಕೂಟವನ್ನೇ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದೇವು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. 
ಸಬ್‌ಏರ್ ಸಿಸ್ಟಮ್ ಅಳವಡಿಕೆಯಿಂದಾಗಿ ಮತ್ತೆ ನಡೆಯುವಂತಾಯಿತು. ಜತೆಗೆ ಪಂದ್ಯದಲ್ಲಿ ನಾವು ಗೆಲುವ ಸಾಧಿಸಿರುವುದು ಸಂತಸ ತಂದಿದೆ. ಹೀಗಾಗಿ ಕೆಎಸ್ಸಿಎಗೆ ದೊಡ್ಡ ಧನ್ಯವಾದಗಳು ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com