ಗಂಗೂಲಿ-ಧೋನಿ
ಗಂಗೂಲಿ-ಧೋನಿ

ಎಂಎಸ್ ಧೋನಿ ಭವ್ಯ ಭವಿಷ್ಯದ ಹಿಂದೆ ಗಂಗೂಲಿ ತ್ಯಾಗವಿದೆ: ಸೆಹ್ವಾಗ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವ್ಯ ಭವಿಷ್ಯಕ್ಕೆ ಕಾರಣ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತ್ಯಾಗ ಎಂದು ಮಾಜಿ...
ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭವ್ಯ ಭವಿಷ್ಯಕ್ಕೆ ಕಾರಣ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತ್ಯಾಗ ಎಂದು ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. 
ಸೌರವ್ ಗಂಗೂಲಿ ಅವರು ಯುವಕರನ್ನು ಬೆಳೆಸಲು ತಮ್ಮ ಬ್ಯಾಟಿಂಗ್ ಸ್ಥಾನವನ್ನೇ ಹಲವು ಬಾರಿ ತ್ಯಾಗ ಮಾಡಿದ್ದಾರೆ. ಸ್ವತಃ ಸೆಹ್ವಾಗ್ ಗಾಗಿಯೂ ಗಂಗೂಲಿ ತಮ್ಮ ಆರಂಭಿಕನ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದರು. ಧೋನಿಯ ವಿಚಾರದಲ್ಲೂ ಹೀಗೆಯೇ ಆಗಿದೆ. ಒಂದು ವೇಳೆ ಗಂಗೂಲಿ ಅದನ್ನು ಮಾಡದಿದ್ದರೆ ಧೋನಿಯ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂದು ಸೆಹ್ವಾಗ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ಟೀಂ ಇಂಡಿಯಾಗೆ ಗಂಗೂಲಿ ನಾಯಕರಾಗಿದ್ದ ಸಂದರ್ಭದಲ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವೊಂದು ಪ್ರಯೋಗಗಳನ್ನು ಮಾಡಲಾಗುತ್ತಿತ್ತು. ಪಾಕಿಸ್ತಾನದ ವಿರುದ್ಧ ಆ ಏಕದಿನ ಪಂದ್ಯದಲ್ಲಿ ಧೋನಿಗೆ ಅವಕಾಶ ನೀಡಲು ಗಂಗೂಲಿ ಅವರನ್ನು 3ನೇ ಕ್ರಮಾಂಕದಲ್ಲಿ ಕಳಿಸಲು ತೀರ್ಮಾನಿಸಿದರು ಅದರಿಂದಾಗಿಯೇ ಧೋನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.

Related Stories

No stories found.

Advertisement

X
Kannada Prabha
www.kannadaprabha.com