ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಇಂದು ಮುಂಬೈನ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ..ಈ ತಿಂಗಳ ಅಂತ್ಯದಲ್ಲಿ ಬರೋಡಾದಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ 19 ವರ್ಷದ ಒಳಗಿನ ಭಾರತೀಯ ತಂಡದಲ್ಲಿ ಅರ್ಜುನ್ ಆಡಲಿದ್ದಾರೆ..17 ವರ್ಷದ ಅರ್ಜುನ್ ಈ ಹಿಂದೆ ಮುಂಬೈನ ಅಂಡರ್ 14 ಮತ್ತು ಅಂಡರ್ 16 ತಂಡಗಳಲ್ಲಿ ಆಡಿದ್ದರು. ಅರ್ಜುನ್, ಆಲ್ ರೌಂಡರ್ ಮತ್ತು ಎಡಗೈ ಬೌಲರ್ ಆಗಿ ಪ್ರಸಿದ್ಧರಾಗಿದ್ದಾರೆ..ಅಂಡರ್ 19 ಕ್ರಿಕೆಟ್ ಸರಣಿ ಇದೇ ಸೆ.16ರಿಂದ 23ರವರೆಗೆ ಬರೋಡಾದಲ್ಲಿ ನಡೆಯಲಿದೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos