ಪಾಕಿಸ್ತಾನದ ವಿರುದ್ಧ ಸರಣಿ ನಡೆಸುವಲ್ಲಿ ವಿಫಲ, ಬಿಸಿಸಿಐ ನಿಂದ ಬೃಹತ್ ಪರಿಹಾರ ಕೇಳಿದ ಪಿಸಿಬಿ

ತವರಿನಲ್ಲಿ ಎರಡು ಕ್ರಿಕೆಟ್ ಸರಣಿ ನಡೆಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 457 ಕೋಟಿ ರೂಪಾಯಿ ನಷ್ಟ ಪರಿಹಾರ ಮೊತ್ತ ನೀದಬೇಕೆಂದು ...........
ನಜಮ್ ಸೇಥಿ
ನಜಮ್ ಸೇಥಿ
Updated on
ಕರಾಚಿ: ತವರಿನಲ್ಲಿ ಎರಡು ಕ್ರಿಕೆಟ್ ಸರಣಿ ನಡೆಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 457 ಕೋಟಿ ರೂಪಾಯಿ ನಷ್ಟ ಪರಿಹಾರ ಮೊತ್ತ ನೀದಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮನವಿ ಮಾಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿವಾದ ಪರಿಹಾರ ಸಮಿತಿಗೆ ಪಾಕಿಸ್ತಾನ ತನ್ನ ಈ ಕುರಿತ ಮನವಿಯನ್ನು ಸಲ್ಲಿಸಿದೆ. 
2015ರಿಂದ 2023ರ ವರೆಗಿನ ಎಂಟು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ ವಿರುದ್ಧ ಆರು ಸರಣಿಗಳನ್ನು ನಡೆಸುವುದಾಗಿ ಬಿಸಿಸಿಐ ಒಪ್ಪಿಕೊಂಡಿತ್ತು. ಇದೀಗ ರಾಜಕೀಯ ಕಾರಣಕ್ಕಾಗಿ ಸರಣಿ  ಪ್ರಾಯೋಜಿಸುವಲ್ಲಿ ಬಿಸಿಸಿಐ ವಿಪಲವಾಗಿದೆ ಎಂದು ಪಿಸಿಬಿ ತನ್ನ ಮನವಿಯಲ್ಲಿ ಹೇಳಿದೆ.
ಪಿಸಿಬಿ ಮುಖ್ಯಸ್ಥ ನಜೀಂ ಸೇಥಿ,  "2008ರಿಂದಲೂ ಭಾರತ ಸರಣಿ ಆಡಲು ನಿರಾಕರಿಸುತ್ತಲೇ ಬಂದಿದೆ,  ಉದ್ವಿಗ್ತ ಪರಿಸ್ಥಿತಿಗಳಿಲ್ಲದ ಸಹಜ ತಾನಗಳಲ್ಲಿಯೂ  ಸರಣಿ ನಡೆಸಲು ಭಾರತ ನಿರಾಕರಿಸಿದೆ". ಎಂದು  ಆರೋಪಿಸಿದ್ದಾರೆ
ಐಸಿಸಿ ಟೂರ್ನಿಗಳ ಹೊರತಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಉಭಯ ಸರಣಿ ಇತ್ತೀಚಿನ ವರ್ಷಗಳಲ್ಲಿ ನಡೆದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com