ಹಾರ್ದಿಕ್ ಪಾಂಡ್ಯ ಇಶಾನ್ ಬಳಿ ಕ್ಷಮೆ ಕೇಳಿದ್ದು ಯಾಕೆ ಗೊತ್ತಾ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್...
ಇಶನ್ ಕಿಶನ್
ಇಶನ್ ಕಿಶನ್
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಇಶಾನ್ ಕಿಶನ್ ಕಣ್ಣಿನ ಸಮೀಪ ಗಂಭೀರ ಗಾಯಗೊಂಡು ಹೊರ ನಡೆದಿದ್ದರು. 
ಹಾರ್ದಿಕ್ ಪಾಂಡ್ಯ ಎಸೆತದ ಬಾಲ್ ಅನ್ನು ಹಿಡಿಯಲು ಹೋಗಿ ಇಶಾನ್ ಕಿಶನ್ ಗಾಯಗೊಂಡಿದ್ದು ಇದಕ್ಕೆ ಹಾರ್ದಿಕ್ ಇಶಾನ್ ಕಿಶನ್ ಬಳಿ ಕ್ಷಮೆಯಾಚಿಸಿದ್ದಾರೆ. 
ಹಾರ್ದಿಕ್ ಪಾಂಡ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ನನ್ನನ್ನು ಕ್ಷಮಿಸು ಸಹೋದರ, ಬಲಿಷ್ಠವಾಗು, ಬೇಗ ಚೇತರಿಸು ಎಂದು ಬರೆದುಕೊಂಡಿದ್ದಾರೆ. 
ಮುಂಬೈ ಇಶಾನ್ ಅವರನ್ನು 6.2 ಕೋಟಿ ರುಪಾಯಿಗೆ ಖರೀದಿ ಮಾಡಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು ಮುಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com