ಬಿಸಿಸಿಐಗೆ ಪತ್ರವೊಂದನ್ನು ಬರೆದಿರುವ ಹರ್ಮನ್ ಪ್ರೀತ್ ಕೌರ್, ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ವಿಶ್ವ ಮಹಿಳಾ ಟಿ20ಗೂ ಕೆಲವೇ ತಿಂಗಳು ಬಾಕಿ ಇದೆ. ಈ ಹಂತದಲ್ಲಿ ಕೋಚ್ ಬದಲಾವಣೆ ಸರಿಯಲ್ಲ. ಅಲ್ಲದೆ ರಮೇಶ್ ಪವಾರ್ ಕೋಚ್ ಆಗಿ ಆಯ್ಕೆಯಾದ ಬಳಿಕ ತಂಡ ಅತ್ಯುತ್ತಮ ಫಾರ್ಮ್ ನಲ್ಲಿದೆ. ಅಲ್ಲದೆ ಆಟಗಾರ್ತಿಯರಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ. ಅಂತೆಯೇ ಆಟಗಾರ್ತಿಯರನ್ನು ಒಗ್ಗೂಡಿಸಿ ಒಂದು ತಂಡವಾಗಿ ಆಡುವಂತೆ ಸ್ಪೂರ್ತಿ ನೀಡಿದ್ದಾರೆ. ನನ್ನ ಪ್ರಕಾರ ಅವರನ್ನು ಬದಲಿಸುವ ಯಾವುದೇ ಸಮರ್ಥನೆ ತಮಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.