ತೆರಿಗೆ ವಿನಾಯಿತಿ ಸಿಗದೇ ಇದ್ದ ಹಿನ್ನೆಲೆಯಲ್ಲಿ 160 ಕೋಟಿ ರೂಪಾಯಿ ಪಾವತಿ ಮಾಡಿ, ಇಲ್ಲದೇ ಇದ್ದರೆ 2023 ರ 50 ಓವರ್ ವಿಶ್ವಕಪ್ ಹಾಗೂ 2021 ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಶಶಾಂಕ್ ಮನೋಹರ್ ಅವರ ನೇತೃತ್ವದ ಐಸಿಸಿ ಬಿಸಿಸಿಐ ಗೆ ಈ ಸೂಚನೆ ನೀಡಿದೆ. 2016 ರಲ್ಲಿ ಟಿ20 ವಿಶ್ವಕಪ್ ನ್ನು ಭಾರತದಲ್ಲಿ ಆಯೋಜನೆ ಮಾಡಿದ್ದ ಐಸಿಸಿಗೆ ಬಂದ ಆದಾಯಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲ. ತೆರಿಗೆ ವಿನಾಯಿತಿ ದೊರಕಿಸಿಕೊಡುವ ಹೊಣೆ ಆತಿಥೇಯ ಮಂಡಳಿಯಾದ್ದಾಗಿರುತ್ತದೆ ಎಂದು ಐಸಿಸಿ ಹೇಳಿದ್ದು, ಬಿಸಿಸಿಐ ಗೆ 160 ಕೋಟಿ ಪಾವತಿ ಮಾಡುವಂತೆ ಹೇಳಿದೆ. ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಿಒಎ ಗೆ ಈಗ ಐಸಿಸಿಗೆ 160 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ 10 ದಿನಗಳ ಕಾಲಾವಕಾಶ ಇದೆ.