ಆ ಮೂಲಕ ಐಸಿಸಿ ನೀಡುವ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಭಾರತದ ಐದನೇ ಆಟಗಾರ ಎಂಬ ಕೀರ್ತಿಗೂ 'ಸವ್ಯಸಾಚಿ' ದ್ರಾವಿಡ್ ಪಾತ್ರರಾಗಿದ್ದಾರೆ. ದ್ರಾವಿಡ್ ಗೂ ಮೊದಲು ಈ ಪ್ರತಿಷ್ಠಿತ ಗೌರವಕ್ಕೆ ಕರ್ನಾಟಕದ ಮತ್ತೋರ್ವ ದಂತಕಥೆ ಅನಿಲ್ ಕುಂಬ್ಳೆ, ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್ ಪಾತ್ರರಾಗಿದ್ದರು. ಅವರ ಬಳಿಕ ರಾಹುಲ್ ದ್ರಾವಿಡ್ ರನ್ನು ಈ ಗೌರವ ಅರಸಿ ಬಂದಿದೆ.