ತಿರುವನಂತಪುರ : ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಏಕದಿನ ಪಂದ್ಯದ ಭಾಗವಾಗಿದ್ದು, ಯುವ ಆಟಗಾರ ರಿಷಬ್ ಪಂತ್ ಗೆ ದಾರಿ ಮಾಡಿಕೊಡಲು ಮುಂಬರುವ ಟಿ-20 ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯ ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಹ್ಲಿ, ಈಗಲೂ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಆದರೆ. ಟಿ-20 ಮಾದರಿಯ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರದಿಂದ ರಿಷಬ್ ಪಂತ್ ಅಂತಹ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.
ಮುಂಬರುವ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯಗಳಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಡಲಾಗಿದೆ. ಮುಂದೆಯೂ ಕೂಡಾ ಈ ಮಾದರಿಯ ಪಂದ್ಯಗಳಲ್ಲಿ ಧೋನಿ ಆಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ನಂಬರ್ 4ರ ಸ್ಥಾನದಲ್ಲಿ ಅಂಬಾಟಿ ರಾಯುಡು ಉತ್ತಮ ಪ್ರದರ್ಶನ ಹಾಗೂ ಯುವ ಆಟಗಾರ ಖಲೀಲ್ ಅಹ್ಮದ್ ಬೌಲಿಂಗ್ ಗೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧ 3-1 ಅಂತರದಿಂದ ಸರಣಿ ಗೆದ್ದಿರುವುದು ಸಕಾರಾತ್ಮಕ ಮನೋಭಾವ ಮೂಡಿಸಿರುವುದಾಗಿ ತಿಳಿಸಿದರು.
Advertisement