ಕಳಪೆ ಫಾರ್ಮ್: ಎಂಎಸ್ ಧೋನಿಯನ್ನು ಟಿ20 ಸರಣಿಯಿಂದ ಹೊರಗಿಟ್ಟಿದ್ದು ಅತ್ಯುತ್ತಮ ನಿರ್ಧಾರ: ಸೌರವ್ ಗಂಗೂಲಿ

ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಒಳ್ಳೆಯ...
ಎಂಎಸ್ ಧೋನಿ-ಸೌರವ್ ಗಂಗೂಲಿ
ಎಂಎಸ್ ಧೋನಿ-ಸೌರವ್ ಗಂಗೂಲಿ
Updated on
ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಒಳ್ಳೆಯ ನಿರ್ಧಾರ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. 
ಎಂಎಸ್ ಧೋನಿ ಅವರನ್ನು ಎರಡು ಟಿ20 ಸರಣಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಕೈ ಬಿಟ್ಟಿದ್ದು ಆಶ್ಚರ್ಯಕರ ವಿಷಯವೆನಲ್ಲ. ಇದು ಉತ್ತಮ ನಿರ್ಧಾರ. ಅವರು ಫಾರ್ಮ್ ಕಳೆದುಕೊಂಡಿದ್ದಾರೆ. ರನ್ ಗಳಿಸಲು ಪರದಾಡುತ್ತಿದ್ದಾರೆ. ಅಲ್ಲದೆ ಧೋನಿ ಅವರು 2020ರ ವಿಶ್ವಕಪ್ ಟಿ20ಯಲ್ಲಿ ಆಡುವುದು ಅನುಮಾನ. ಹೀಗಾಗಿ ಭಾರತಕ್ಕೆ ಬದಲಿ ಕೀಪರ್ ನ ಅಗತ್ಯವಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದ್ದು ಧೋನಿಯನ್ನು ಕೈ ಬಿಟ್ಟು ಉತ್ತಮ ಫಾರ್ಮ್ ನಲ್ಲಿರುವ ರಿಷಬ್ ಪಂತ್ ಗೆ ಸ್ಥಾನ ನೀಡಲಾಗಿದೆ ಎಂದರು. 
ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಟೆಸ್ಟ್ ಸರಣಿಗೆ 15 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com