ಬೆಂಗಳೂರು: ತಮ್ಮ ನೆಚ್ಚಿನ ಆಟಗಾರರನ್ನು ಕಂಡಾಗ ಅವರನ್ನು ಅಪ್ಪಿಕೊಳ್ಳುವುದು ಅಥವಾ ಕಾಲಿಗೆರಗುವುದು ಸಾಮಾನ್ಯ. ಅಂತೆ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿಯಲ್ಲಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಕಾಲಿಗೆರಗಿದ್ದಾನೆ.
ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ವೀರೇಂದ್ರ ಸೆಹ್ವಾಗ್ ಕೆಸಿಸಿಯಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ಈ ವೇಳೆ ಮೈದಾನದಲ್ಲಿ ಅವರ ಆಟ ಕಂಡು ಬೆರಗಾದ ಅಭಿಮಾನಿಯೊಬ್ಬ ಮೈದಾನದಲ್ಲೇ ಸೆಹ್ವಾಗ್ ರನ್ನು ಅಪ್ಪಿ, ಕಾಲಿಗೆರಗಿದ್ದಾನೆ ಈ ವಿಡಿಯೋ ಇದೀಗ ವೈರಲ್ ಆಗಿದೆ.
When a fan entered the ground and touched #Virupaaji feet