ಪ್ರಸ್ತುತ ಪಾಂಡ್ಯಾ, ರಾಹುಲ್ ಪ್ರಕರಣ ಬಿಸಿಸಿಐ ಆಡಳಿತ ಮಂಡಳಿಯ 8 ಸದಸ್ಯರ ಶಿಸ್ತು ಸಮಿತಿ ಮುಂದಿದ್ದು, ಈ ಸಮಿತಿ ಮುಖ್ಯಸ್ಥರಾಗಿರುವ ಡಯಾನಾ ಎಡುಲ್ಜಿ ಅವರು ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆಟಗಾರರಿಗೆ ಬಿಸಿಸಿಐ ನೋಟಿಸ್ ನೀಡಿದ್ದು, ಈ ಪೈಕಿ ಪಾಂಡ್ಯಾ ಅದಕ್ಕೆ ಪ್ರತಿಕ್ರಿಯೆ ನೀಡಿ ಕ್ಷಮೆ ಕೂಡ ಕೇಳಿದ್ದಾರೆ. ಆದರೆ ಕೆಎಲ್ ರಾಹುಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಿದ್ದು, ಅವರ ಪ್ರತಿಕ್ರಿಯೆ ಬಂದ ಬಳಿಕ ಬಿಸಿಸಿಐ ಶಿಸ್ತು ಸಮಿತಿ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.