ಕ್ರಿಕೆಟ್‌ನಿಂದ ನಿಷೇಧ: ಇನ್ನಷ್ಟು ಸಮರ್ಥನಾಗಿ ಮೈದಾನಕ್ಕೆ ಮರಳುತ್ತೇನೆ; ಪೃಥ್ವಿ ಶಾ

ಉದ್ದೀಪನಾ ಮದ್ದು ಸೇವನೆಯಿಂದ ಸಿಕ್ಕಿ ಬಿದ್ದು ಎಂಟು ತಿಂಗಳು ಕ್ರಿಕೆಟ್ ನಿಂದ ಅಮಾನತುಗೊಂಡಿರುವ ಭಾರತ ಟೆಸ್ಟ್ ತಂಡದ ಆರಂಭಿಕ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಇನ್ನೂ ಹೆಚ್ಚು ಬಲಶಾಲಿ...
ಪೃಥ್ವಿ ಶಾ
ಪೃಥ್ವಿ ಶಾ
Updated on
ನವದೆಹಲಿ: ಉದ್ದೀಪನಾ ಮದ್ದು ಸೇವನೆಯಿಂದ ಸಿಕ್ಕಿ ಬಿದ್ದು ಎಂಟು ತಿಂಗಳು ಕ್ರಿಕೆಟ್ ನಿಂದ ಅಮಾನತುಗೊಂಡಿರುವ ಭಾರತ ಟೆಸ್ಟ್ ತಂಡದ ಆರಂಭಿಕ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಇನ್ನೂ ಹೆಚ್ಚು ಬಲಶಾಲಿ ಹಾಗೂ ಸುಧಾರಣೆಯೊಂದಿಗೆ ಅಂಗಳಕ್ಕೆ ಮರಳುವುದಾಗಿ ಹೇಳಿಕೊಂಡಿದ್ದಾರೆ. 
ಕಳೆದ ಫೆಬ್ರವರಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ಪೃಥ್ವಿ ಶಾ ಅವರ ಮೂತ್ರದ ಮಾದರಿಯನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಡೋಪಿಂಗ್ ಪರೀಕ್ಷೆಯಿಂದ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿತ್ತು. ಹಾಗಾಗಿ, ಅವರಿಗೆ ಎಂಟು ತಿಂಗಳ ಕಾಲ ಬಿಸಿಸಿಐ ಕ್ರಿಕೆಟ್ ನಿಂದ ಅಮಾನತುಗೊಳಿಸಿದೆ.
ಶಿಕ್ಷೆಗೆ ಒಳಗಾಗಿರುವ ಯುವ ಬ್ಯಾಟ್ಸ್ ಮನ್ ಕಳೆದ ಮಾರ್ಚ್ 16ರಿಂದ ಮುಂಬರುವ ನವೆಂಬರ್ 15ರವರೆಗೆ ಕ್ರಿಕೆಟ್ ನಿಂದ ದೂರ ಉಳಿಯಲಿದ್ದಾರೆ. ಸೆಪ್ಟಂಬರ್ 15 ಮಧ್ಯರಾತ್ರಿಯಿಂದ ಅವರು ಕ್ರಿಕೆಟ್ ಅಭ್ಯಾಸಕ್ಕೆ ಮರಳಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com