ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವೇಳೆ ಮೊದಲು ಬ್ಯಾಟಿಂಗ್ ಪಡೆದ ಸನ್ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ (70*) ನೆರವಿನೊಡನೆ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತ್ತು.
ಪ್ರಾರಭಿಕರಾಗಿದ್ದ ವೃದ್ದಿಮಾನ್ ಸಹಾ(20) ಹಾಗೂ ಮಾರ್ಟಿನ್ ಗಪ್ಟಿಲ್ (30) ರನ್ ಗಳಿಸಿದ್ದರೆ ಮನ್ಬೀಶ್ ಪಾಂಡೆ ಕೇವಲ 9 ರನ್ ಗಳಿಸಿ ಔಟಾಗಿದ್ದರು. ಆ ಬಳಿಕ ಬಂದ ವಿಜಯ ಶಂಕರ್ 18 ಎಸೆತದಲ್ಲಿ 27 ರನ್ ಗಳಿಸಿದ್ದು ಹೊರತುಪಡಿಸಿದರೆ ಇನ್ನಾರೂ ಎರಡಂಕಿ ತಲುಪಲಿಲ್ಲ. ಹಾಗಾಗಿ ಹೈದರಾಬಾದ್ ಪರ ವಿಲಿಯಮ್ಸನ್ ಒಬ್ಬರೇ ಶ್ರೇಷ್ಠ ಪ್ರದರ್ಶನ ತೋರಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾಗಿದ್ದರು.
ಹೈದರಾಬಾದ್ ನೀಡಿದ್ದ ಈ ಗುರಿಯನ್ನು ಬೆನ್ನತ್ತಿದ ವಿರಾಟ್ ಕೊಹ್ಲಿ ಬಳಗದಲ್ಲಿಯೂ ಪ್ರಾರಂಭದಲ್ಲಿ ಗಟ್ಟಿ ಸವಾಲೊಡ್ಡಲು ಸಾಧ್ಯವಾಗಿರಲಿಲ್ಲ. ಪಾರ್ಥಿವ್ ಪಟೇಲ್ ಖಾತೆ ತೆರೆಯದೇ ಶೂನ್ಯಕ್ಕೆ ಔಟಾಗಿದ್ದರೆ ನಾಯಕ ಕೊಹ್ಲಿ 1 ಬೌಂಡರಿ, 2 ಸಿಕ್ಸರ್ ನೊಡನೆ 7 ಎಸೆತಗಳಲ್ಲಿ 16 ರನ್ ಗಳಿಸಿದ್ದರು.
ಇನ್ನ್ಯು ಬಹು ನಿರೀಕ್ಷಿತ ಬ್ಯಾಟ್ಸ್ ಮನ್ ಎಬಿ ಡೆವಿಲ್ಲಿಯರ್ಸ್ ಸಹ 2 ಎಸೆತದಲ್ಲಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಆ ಬಳಿಕ ಜತೆಯಾದ ಶಿಮ್ರಾನ್ ಹೆಟ್ಮಾಯೆರ್ ಹಾಗೂ ಗುರ್ಕೀರಾತ್ ಸಿಂಗ್ ಮನ್ ತಂಡವನ್ನು ಗೆಲುವಿನ ಹಾದಿಗೆ ಮರಳಿಸಿದ್ದಾರೆ.
ಹೆಟ್ಮಾಯೆರ್ 6 ಸಿಕ್ಸರ್ 4 ಬೌಂಡರಿಗಳೊಡನೆ 47 ಎಸೆತಕ್ಕೆ 75 ರನ್ ಗಳಿಸಿದ್ದರೆ ಗುರ್ಕೀರಾತ್ ಸಿಂಗ್ ಮನ್ 1 ಸಿಕ್ಸರ್ 8 ಬೌಂಡರಿ ಗಳೊಡನೆ 48 ಎಸೆತದಲ್ಲಿ 65 ರನ್ ಕಲೆ ಹಾಕಿದರು.
ಈ ಇಬ್ಬರ ನಿರ್ಗಮದ ವೇಳೆಗೆ ಬೆಂಗಳೂರಿಗೆ ಗೆಲುವು ಪಕ್ಕಾ ಆಗಿತ್ತು. ಇದಾಗಿಯೂ ಅಂತಿಮಸುತ್ತಿನ್ಬಲ್ಲಿ ಕ್ರೀಸ್ ಗಿಳಿದ ಉಮೇಶ್ ಯಾದವ್,ಹಾಗೂ ಕಾಲಿನ್ ಕ್ರಮವಾಗಿ 9 ಹಾಗೂ 3 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.