ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ: ವಿರಾಟ್

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು 28 ರನ್ ಗಳಿಂದ ಮಣಿಸಿ ಸೆಮಿಫೈನಲ್ಸ್ ತಲುಪಿದ್ದು, ನಿಜಕ್ಕೂ ಸಂತಸ ತಂದಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ: ವಿರಾಟ್
ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ: ವಿರಾಟ್
ಬರ್ಮಿಂಗ್ ಹ್ಯಾಮ್: ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು 28 ರನ್ ಗಳಿಂದ ಮಣಿಸಿ ಸೆಮಿಫೈನಲ್ಸ್ ತಲುಪಿದ್ದು, ನಿಜಕ್ಕೂ ಸಂತಸ ತಂದಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಭಾರತ ತಂಡ ಆಡಿರುವ 8 ಪಂದ್ಯಗಳಿಂದ ಆರು ಜಯ ಸಾಧಿಸಿ, ಒಂದು ಪಂದ್ಯ ರದ್ದಾಗಿದ್ದು, ಒಂದು ಪಂದ್ಯ ಸೋತಿದೆ. ಟೀಮ್ ಇಂಡಿಯಾ ಒಟ್ಟು 13 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಆಸ್ಟ್ರೇಲಿಯಾ ಬಳಿಕ ಸೆಮಿಫೈನಲ್ಸ್ ಪ್ರವೇಶಿಸಿದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಟೂರ್ನಿಯಲ್ಲಿ ಭಾರತ ಇನ್ನು ಒಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿದೆ.
' ಬಾಂಗ್ಲಾ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ವಿಫಲವಾಗಿದ್ದರೂ, ಭರ್ಜರಿ ಪ್ರದರ್ಶನ ನೀಡಿದೆ. ಎದುರಾಳಿ ತಂಡ ಕೊನೆಯ ವರೆಗೂ ಹೋರಾಟ ಪ್ರದರ್ಶಿಸಿದೆ. ಕೊನೆಯ ವಿಕೆಟ್ ವರೆಗೂ ಬಾಂಗ್ಲಾ, ಗೆಲುವಿನ ವಿಶ್ವಾಸ ಹೊಂದಿತ್ತು. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಬಹಳ ಕಷ್ಟಪಡಬೇಕಾಯಿತು' ಎಂದು ವಿರಾಟ್ ತಿಳಿಸಿದ್ದಾರೆ.

'ತಂಡ ಸೆಮಿಫೈನಲ್ಸ್ ಪ್ರವೇಶಿಸಿದ್ದು ಖುಷಿ ತಂದಿದೆ. ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ ಮುಂದುವರೆಸಿದ್ದೇವೆ. ಒಂದು ಪಂದ್ಯ ಬಾಕಿ ಇರುವಂತೆ ಸೆಮಿಫೈನಲ್ಸ್ ತಲುಪಿದ್ದು ಸಂತಸ ತಂದಿದೆ' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com