ಬೆಂಗಳೂರು: ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಅವರು ರಾಜಸ್ತಾನ ತಂಡದ ಜಾಸ್ ಬಟ್ಲರ್ ಮಂಕಡ್ ರನೌಟ್ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಅಶ್ವಿನ್ ಕ್ರೀಡಾ ಸ್ಪೂರ್ತಿ ಇಲ್ಲದ ಕ್ರಿಕೆಟಿಗ ಎಂಬ ಟೀಕೆಗೆ ಗುರಿಯಾಗಿದ್ದರು. ಇದೀಗ ಕೃನಾಲ್ ಪಾಂಡ್ಯ ಮೈದಾನದಲ್ಲೇ ಅಶ್ವಿನ್ ರನ್ನು ಅಣುಕಿಸುವ ಮೂಲಕ ನೀವು ಮಾಡಿದ್ದು ಎಷ್ಟು ಸರಿ ಎಂಬಂತೆ ಪ್ರಶ್ನಿಸಿದ್ದಾರೆ.