"ಮಹೇಂದ್ರ ಸಿಂಗ್ ಧೋನಿ ಗಾಯಗೊಂಡರೆ ದಿನೇಶ್ ಕಾರ್ತಿಕ್ ಅಥವಾ ರಿಷಭ್ ಪಂತ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಡಿಸಲಾಗುತ್ತದೆ. ಪಂದ್ಯದಲ್ಲಿ ಬ್ಯಾಟಿಂಗ್ ಜತೆ ವಿಕೆಟ್ ಕೀಪಿಂಗ್ ಕೂಡ ಅತ್ಯಂತ ಮುಖ್ಯ. ಹಾಗಾಗಿ, ಪಂತ್ ಕೈ ಬಿಟ್ಟು ದಿನೇಶ್ ಕಾರ್ತಿಕ್ ಅವರನ್ನು ಐಸಿಸಿ ವಿಶ್ವಕಪ್ಗೆ ಮಣೆ ಹಾಕಲಾಗಿದೆ. ಪಂತ್ ಪ್ರತಿಭಾನ್ವಿತ ಆಟಗಾರ ಅದರಲ್ಲಿ ಅನುಮಾನವೇ ಇಲ್ಲ. ಅವರಿಗೆ ಇನ್ನೂ ಹೆಚ್ಚು ಅವಕಾಶವಿದೆ." ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಪಂತ್ ಬದಲು ಕಾರ್ತಿಕ್ ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದರು.