ಮುಂಬೈ: ಕೊರೋನಾ ವೈರಸ್ನಿಂದಾಗಿ ಲಾಕ್ಡೌನ್ ಘೋಷಿಲಾಗಿದ್ದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಭಾನುವಾರ ಈಸ್ಟರ್ ಸಂದರ್ಭದಲ್ಲಿ ಸಂದೇಶವನ್ನು ನೀಡಿದ್ದು, ನಾವೆಲ್ಲರೂ ಒಟ್ಟಾಗಿ ಈ ಸವಾಲಿನ ಕಷ್ಟದ ಸಮಯವನ್ನು ಎದುರಿಸಬೇಕಿದೆ ಎಂದು ಹೇಳಿದ್ದಾರೆ.
ಭರವಸೆ ಕಳೆದುಕೊಳ್ಳಬಾರದು ಮತ್ತು ಆತ್ಮವಿಶ್ವಾಸ ಹೊಂದವುದನ್ನು ಈಸ್ಟರ್ ನಮಗೆ ಕಲಿಸುತ್ತದೆ" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಕತ್ತಲೆಯ ನಂತರ ಯಾವಾಗಲೂ ಬೆಳಕು ಇರುತ್ತದೆ. ನಮ್ಮ ಪ್ರಾರ್ಥನೆ ಮತ್ತು ಮಾನಸಿಕ ಇಚ್ಶಾಶಕ್ತಿಯ ಮೂಲಕ ನಾವೆಲ್ಲರೂ ಈ ಕಷ್ಟದ ಸಮಯವನ್ನು ಒಟ್ಟಿಗೆ ಎದುರಿಸುತ್ತೇವೆ. ನಿಮ್ಮೆಲ್ಲರಿಗೂ ಈಸ್ಟರ್ ಶುಭಾಶಯಗಳು" ಎಂದಿದ್ದಾರೆ.
Advertisement