ಚೆಂಡು ಬಡಿದು ಕುಸಿದು ಬಿದ್ದ ಬೌಲರ್ ನೆರವಿಗೆ ಧಾವಿಸಿ ಅಭಿಮಾನಿಗಳ ಹೃದಯ ಗೆದ್ದ ಸಿರಾಜ್, ವಿಡಿಯೋ!

ಆಸ್ಟ್ರೇಲಿಯಾ 'ಎ' ವಿರುದ್ಧದ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಸಿಡಿಸಿದ ಚೆಂಡು ಬಡಿದು ಕುಸಿದು ಬಿದ್ದ ಬೌಲರ್ ನೆರವಿಗೆ ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಕೂಡಲೇ ಧಾವಿಸಿದ್ದು ಇದು ಅಭಿಮಾನಿಗಳ ಮನ ಗೆದ್ದಿದೆ.
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್
Updated on

ಸಿಡ್ನಿ: ಆಸ್ಟ್ರೇಲಿಯಾ 'ಎ' ವಿರುದ್ಧದ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಸಿಡಿಸಿದ ಚೆಂಡು ಬಡಿದು ಕುಸಿದು ಬಿದ್ದ ಬೌಲರ್ ನೆರವಿಗೆ ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಕೂಡಲೇ ಧಾವಿಸಿದ್ದು ಇದು ಅಭಿಮಾನಿಗಳ ಮನ ಗೆದ್ದಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೂಮ್ರಾ 57 ಎಸೆತಗಳಲ್ಲಿ 55 ರನ್ ಗಳಿಸಿದ ಶ್ರೇಷ್ಠ ಭಾರತೀಯ ಆಟಗಾರ ಎನಿಸಿಕೊಂಡರು. ಇನ್ನು 40 ರನ್ ಗಳಿಸಿದ್ದಾಗ ಬುಮ್ರಾ ಆಸ್ಟ್ರೇಲಿಯಾ ಎ ತಂಡದ ವೇಗಿ ಕ್ಯಾಮೆರೂನ್ ಗ್ರೀನ್ ಎಸೆದ ಚೆಂಡನ್ನು ಸ್ಟ್ರೈಟ್ ಡ್ರೈವ್ ಮಾಡಿದರು. ಈ ವೇಳೆ ಚೆಂಡು ಬಡಿದು ಗ್ರೀನ್ ಕುಸಿದು ಬಿದ್ದರು. 

ಈ ವೇಳೆ ಬುಮ್ರಾ ರನ್ ಓಡಲು ಮುಂದಾದರೂ ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಮೊಹಮ್ಮದ್ ಸಿರಾಜ್ ಬ್ಯಾಟ್ ಬೀಸಾಡಿ ಗ್ರೀನ್ ನೆರವಿಗೆ ಧಾವಿಸಿದರು. ಈ ಮೂಲಕ ಕ್ರೀಡಾಮನೋಭಾವ ಪ್ರದರ್ಶಿಸಿದರು. ಸಿರಾಜ್ ವ್ಯಕ್ತಿತ್ವವನ್ನು ಅಭಿಮಾನಿಗಳು ಹಾಡಿ ಹೋಗಳಿದ್ದಾರೆ. 

ಭಾರತ ತಂಡ, ಆಸ್ಟ್ರೇಲಿಯಾ(ಎ) ವಿರುದ್ದದ ಮೂರು ದಿನಗಳ ಫಿಂಕ್‌ ಬಾಲ್‌ ಅಭ್ಯಾಸ ಪಂದ್ಯದ ಮೊದಲನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ 194 ರನ್‌ಗಳಿಗೆ ಆಲೌಟ್‌ ಆಗಿದೆ. ನಂತರ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎ ತಂಡ 27 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ ಆಡುತ್ತಿದೆ. 

ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com